ತನ್ನ ಪರಿಸ್ಪಂದವ ಸಾಕುವುದಕ್ಕೆ
ಗುರು ಲಿಂಗಜಂಗಮಕ್ಕೆಂದು ಬೇಡಿ ಒಡಲ ಹೊರೆವ ಪರಿ.
ಇನ್ನೆಂತುಂಟಯ್ಯಾ?
ಗುರುವಿಂಗೆಂದಲ್ಲಿ ಅಂಗದಾಸೆಯಿಲ್ಲದೆ,
ಲಿಂಗಕ್ಕೆಂದಲ್ಲಿ ಸಂದು ಸಂಶಯವಿಲ್ಲದೆ,
ಜಂಗಮಕ್ಕೆಂದಲ್ಲಿ ಇಂದು ನಾಳೆಯೆಂಬ
ಸಂದೇಹವ ಹರಿದು ಮಾಡುವನ ಇರವೆ
ಷಡುಸ್ಥಲ ಬ್ರಹ್ಮಮೂರ್ತಿ.
ಆತ ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ,
ಆತ ಕಾಲಾಂತಕಲಿಂಗವು ತಾನೆ.