ಉದಕವ ಬೆರೆಸಿದ ಕುಂಪಟಿಯಂತೆ,
ಬಹುಗಂಧವ ಕೂಡಿದ ವಾಯುವಿನಂತೆ,
ಗುಣ ದೋಷಂಗಳ ವಿಚಾರಿಸದಿಪ್ಪುದು ಸದ್ಭಕ್ತನಿರವು,
ಮಾಡುವ ಭೇದ ಸ್ಥಲ; ಸರಮೃತ್ತಿಕೆಯಲ್ಲಿ ಒಸರಲಿಲ್ಲದೆ ನಿಂದಂತೆ;
ಈಶ್ವರನ ಶರಣರಿಗೆ ಭಕ್ತಿಯ ಮಾಡುವ ದಾಸೋಹದ ಸದ್ಭಕ್ತನ ಇರವು.
ಅದು ಸುಕ್ಷೇತ್ರವಾಸ, ಕಾಲಾಂತಕ ಭೀಮೇಶ್ವರಲಿಂಗನತೆರಪಿಲ್ಲದ ಸುಖವಾಸ.