ಜ ಪದದಿಂದ ಪ್ರಾರಂಭವಾಗುವ ವಚನಗಳು:
ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ,ಆ ಜಲ ನಿಲೆ ಮಣ್ಣು ಮುನ್ನಿನ ಅಂಗವ ಬೆರಸಿದಂತೆ.ಆ ಕುರುಹಿಂಗೆ ಅರಿವೆ ಆಶ್ರಯವಾಗಿ,ಆ ಅರಿವಿಂಗೆ ಕರುಹಿನ ವಾಸ ಅವಗವಿಸಿದ ಮತ್ತೆ,ಬೇರೊಂದೆಡೆಯಿಲ್ಲ, ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
ಜಾಗ್ರಾವಸ್ಥೆಯಲ್ಲಿ ಸುಳಿಹುದೋರಿದ ಶಕ್ತಿಸ್ವಪ್ನಾವಸ್ಥೆಗೆ ತಲೆದೋರಿದ ಮತ್ತೆಬೇರೊಂದುಭಯಕ್ಕೆ ಕಟ್ಟುಂಟೆ?ಆಸೆಯೆಂಬುದೆ ಮಾರಿ, ನಿರಾಸೆಯೆಂಬುದೆ ದೇವಪದ.ದೇವನ ನೆನೆದು ಕಾಯಕವ ಮಾಡಿದಲ್ಲಿ ಆವ ಪದಕ್ಕೂ ಸುಖ,ಕಾಲಾಂತಕ ಭೀಮೇಶ್ವರಲಿಂಗವ ಕುರಿತು ಮಾಡಿದಲ್ಲಿ.
ಜಂಗಮವೆಂದು ಭಕ್ತನಾಶ್ರಯಕ್ಕೆ ಹೋದಲ್ಲಿಉಪಾಧಿಕನಂಗೀಕರಿಸಿ ಮಜ್ಜನ ಭೋಜನ ಪರಿಮಳಂಗಳಲ್ಲಿ ಕೀಳಾಗಿಪೂಜಿಸುವಲ್ಲಿ ಮೇಲಾದ ಪರಿಯಿನ್ನೆಂತಯ್ಯಾ?ಆತ ಮಾಡುವುದಕ್ಕೆ ಮುನ್ನವೆ ಬೇಡದಿಪ್ಪುದೆ ವಸ್ತುಗುಣ.ಆತ ಕಾಡುವುದಕ್ಕೆ ಮುನ್ನವೆ ಮಾಡುತ್ತಿಪ್ಪುದೆ ಭಕ್ತಿಗುಣ.ಉಭಯದಾರೈಕೆಯನರಿದು ಆರೈದಾಗಲೆ ಉಭಯಸ್ಥಲ ನಿರುತ.ಆ ಗುಣವಾದಲ್ಲಿ ಉಭಯ ಏಕೀಕರವಾಯಿತ್ತು.ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ.