ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು.ಅಲ್ಲ, ಅಹುದೆಂಬುದು ಬಲ್ಲವನ ಮತವಲ್ಲ.ಎಲ್ಲಿಯೂ ಸದ್ಗುಣ, ಎಲ್ಲರಲ್ಲಿ ನಿಜಭಾವ,ಪರಿಪೂರ್ಣ ತಾನಾಗಿರಬೇಕು,ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ,ಕೆಳಗೆ ನೋಡುವಾತನಿಗೆ ಆಶ್ಚರ್ಯವಾದಂತೆ,ವಸ್ತುಕೂಟ ಆಟ, ಮತ್ರ್ಯರ ಬೇಟ ನಿಶ್ಚಯವಾಗಿರಬೇಕು,ಐಘಟದೂರ ರಾಮೇಶ್ವರಲಿಂಗಕ್ಕೆ.