ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು. ಸಸಿಯಿಲ್ಲದ ಫಲವುಂಟೆ ಅಯ್ಯಾ ? ಇಷ್ಟದ ಅರ್ಚನೆ ಅರತು, ಚಿತ್ತ ದೃಷ್ಟವ ಕಾಬುದಕ್ಕೆ ಗೊತ್ತಾವುದು ಹೇಳಯ್ಯಾ ? ಅದು ಮುಟ್ಟಿದ ಮುಟ್ಟಿನಲ್ಲಿ ಒದಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ ? ಅವ ಮಾತ ಕಲಿತ ಮಾತುಗನಂತೆ, ಆಟವ ಕಲಿತ ಕೋಲಾಟಿಕನಂತೆ. ಛೀ ಅದೇತರ ಅರಿವು ? ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.
--------------
ಮೆರೆಮಿಂಡಯ್ಯ
ಬೀಜ ಗುರುವಾಗಿ, ಅಂಕುರ ಲಿಂಗವಾಗಿ, ಅದರ ಫಲರಸಕಳೆ ಜಂಗಮವಾಗಿ, ಮೂರನುಳಿಯೆ ನಿಂದುದು ನಿಜತತ್ವವಾಗಿ, ವಿರಕ್ತಭಾವದಲ್ಲಿ ನಿಂದುದು ಜ್ಞಾನಜಂಗಮ. ಆ ಭಾವ, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ ಸತ್ಯಜ್ಞಾನ ಸಂಬಂಧಶ್ಚ ತದ್ಯಥಾ ಶ್ರುಣು ಪಾರ್ವತಿ || ಎಂದಕಾರಣ, ಬಂಧನದೈಕ್ಯವ ಶಿವಶರಣರೊಪ್ಪರಾಗಿ. ಅದೆಂತೆಂದಡೆ: ತೈಲ ಬತ್ತಿಯುಳ್ಳನ್ನಕ್ಕ ಜ್ಯೋತಿ ಬಯಲಾಗದು. ಎಣ್ಣೆ ಬತ್ತಿ ತೀರಿದ ಮೇಲೆ ಗೃಹದೊಳಗಣ ಜ್ಯೋತಿ ಉರಿಯಬಲ್ಲುದೆ ಹೇಳಿರಣ್ಣಾ ? ಈ ದೃಷ್ಟಾಂತದಂತೆ, ದೇಹಿಗಳ ದೇಹಮಧ್ಯದಲ್ಲಿ ಸಪ್ತಧಾತುಗಳುಳ್ಳ ಪರಿಯಂತರ ಪಂಚಾಗ್ನಿಯಿದ್ದ ಜೀವರುಗಳು ಪ್ರಾಣತ್ಯಾಗವ ಮಾಡುವುದು. ಹಾಗೆ ಶರಣನ ದೇಹಮಧ್ಯದಲ್ಲಿ ಚಿದಗ್ನಿಯಿದ್ದು, ಪ್ರಾಣ ದಗ್ಧವ ಮಾಡಿ, ವಸ್ತುವಿನಲ್ಲಿ ಎಯ್ದಿಸುತ್ತಿರಲಾಗಿ, ಆತನ ಅರಿವು ಮರವೆಗೆ ಕರ್ತರಾಗಿಪ್ಪ ತೆತ್ತಿಗತ್ತ್ವವಲ್ಲದೆ ತಾವು ಕಳಂಕರಾಗಿ, ಆತನ ವಿಕಳತೆಯಿಂದ ಐಕ್ಯವ ಮಾಡಿದಡೆ, ಆ ದ್ರೋಹ ತಮಗಲ್ಲದೆ ಆತಂಗಿಲ್ಲ. ಇಂತೀ ವಿವೇಕವುಳ್ಳ ವೀರಮಾಹೇಶ್ವರರ ಐಘಟದೂರ ರಾಮಲಿಂಗವೆಂಬೆ. ಅಲ್ಲದಿರ್ದಡೆ, ನೀ ಸಾಕ್ಷಿಯಾಗಿ ಛೀ ಎಂಬೆನು.
--------------
ಮೆರೆಮಿಂಡಯ್ಯ
ಬಸವಣ್ಣ ಚೆನ್ನಬಸವಣ್ಣ ಪ್ರಭು ಮಡಿವಾಳ ನಿಜಗುಣ ಶಿವಯೋಗಿ ಸಿದ್ಧರಾಮ ಮೋಳಿಗೆಯ್ಯ ಆಯ್ದಕ್ಕಿಯ ಮಾರಯ್ಯ ಏಕಾಂತರಾಮಯ್ಯ ಅಜಗಣ್ಣ ಶಕ್ತಿಮುಕ್ತಿ ಮಹಾದೇವಿಯಕ್ಕ ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ, ಆ ಪ್ರಸಾದವೆನಗೆ ಪ್ರಸನ್ನ. ನಿಮಗೆ ಮತ್ರ್ಯದ ಮಣಿಹ ಹಿಂಗುವನ್ನಕ್ಕ ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ, ನಾ ಹಿಡಿದ ನೇಮದಾ ಭಿಕ್ಷೆಯಲ್ಲಿ, ನಾ ತಪ್ಪಿದಡೆ, ತಪ್ಪು ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದು ಕೂಡಿದಡೆ, ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಕ್ರೀಭಿನ್ನ ಭಿನ್ನದೋರಿದಲ್ಲಿ ಆಚಾರವೆ ಪ್ರಾಣವಾದ [ಐಘಟದೂರ] ರಾಮೇಶ್ವರಲಿಂಗದಲ್ಲಿಯೇ ಲೀಯ.
--------------
ಮೆರೆಮಿಂಡಯ್ಯ