ಲಿಂಗಪ್ರಾಣಿಗಳಾದ ಭಕ್ತ ಮಾಹೇಶ್ವರರ
ವ್ರತಲಿಂಗ ಸಂಕಲ್ಪವನು ತಿಳಿದು, ವಿಚಾರಿಸಿ ನೋಡಿ,
ಮುಹೂರ್ತವ ಮಾಡಿಸಿಕೊಂಡಿಪ್ಪ ಸಮಯದಲ್ಲಿ,
ರಾಜಭಯ ಚೋರಭಯದಿಂದವೆ ಕಂಟಕ ಬರಲು,
ಅಂಜಿ ಕಥನವಂ ಮಾಡಿಕೊಳಲಾಗದು.
ಅದೆಂತೆಂದಡೆ:
ಆ ವಿಚಾರವೆಲ್ಲವ ಭಕ್ತ ಮಾಹೇಶ್ವರರು ತಿಳಿದು ನೋಡಿಕೊಂಡು,
ಆ ಲಿಂಗಸಮ್ಮರ್ಧನ ಸಂದೇಹವಿಲ್ಲದೆ ಶಿರಿಚ್ಫೇದಮಂ ಮಾಡುವುದು.
ಇದಕ್ಕೆ ದ್ರೋಹವಿಲ್ಲ.
ಉಂಟೆಂದು ನುಡಿದವವರ, ರವಿಚಂದ್ರರುಳ್ಳ ಪರಿಯಂತರ
ಎಕ್ಕಲನರಕದಲ್ಲಿಕ್ಕುವರು.
ಇದಕ್ಕೆ ಆದ್ಯರ ವಚನವೆ ಸಾಕ್ಷಿ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಐಘಟದೂರ ರಾಮೇಶ್ವರಲಿಂಗವೆ,
ಆ ವೀರಮಾಹೇಶ್ವರರನೇನೆಂಬೆನು.