ತನ್ನ ಕಾಯ್ವ ಸೆಡೆಯವಲ್ಲದೆ, ಸೆಡೆಯವ ಕಾಯ್ವ ಅಂಗವುಂಟೆ ಅಯ್ಯಾ ? ವಸ್ತುಮುಖದಿಂದ ಎಲ್ಲವನರಿಯಬೇಕಲ್ಲದೆ, ವಸ್ತು ತನ್ನ ಕಟ್ಟಿಗೆ ನಿಶ್ಚಯವೆ ? ಅದು ತನ್ನ ಉಭಯದ ಕೇಡು, ಐಘಟದೂರ ರಾಮೇಶ್ವರಲಿಂಗಕ್ಕೆ.
ತನ್ನವರನ್ಯರಹರು, ಹೆಣ್ಣು ಹೊನ್ನು ಮಣ್ಣು ಹಿಡಿದು ಹೋರಲಾಗಿ. ಆ ಮೂರ ಬಿಟ್ಟಡೆ ಅನ್ಯರು ತನ್ನವರಹರು. ಅರಿದವಂಗೂ ಸರಿ, ಜಗದ ಒಡಲಾದವಂಗೂ ಸರಿ ಆಸೆವೊಂದೇ ಭೇದ. ಉಭಯಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.