ನ ಪದದಿಂದ ಪ್ರಾರಂಭವಾಗುವ ವಚನಗಳು:
ನೆರೆ ನಂಬಿ-ಕರೆದಡೆ ನರಿ ಕುದುರೆಯಾಗಿ ಹರಿವೆ?ಜಗವೆಲ್ಲಾ ಅರಿಯಲು ತೊರೆಯೊಳಗೆ ಬಿದ್ದ ಲಿಂಗಕರೆದಡೆ ಬಂದುದು ಕರಸ್ಥಲಕ್ಕೆ.ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.
ನಡೆ ನೋಟ ಸೊಲ್ಲೆಡೆಯಲ್ಲಿ ಒಂದು ಕಿಚ್ಚು.ಮಡದಿ ಪುರುಷರೆಡೆಯಲ್ಲಿ ಒಂದು ಕಿಚ್ಚು.ತಡದುಂಬೆಡೆಯಲ್ಲಿ ಒಂದು ಕಿಚ್ಚು.ಪಡೆದರ್ಥ ಕೆಟ್ಟೆಡೆಯಲ್ಲಿ ಒಂದು ಕಿಚ್ಚು.ಕೂಡಿದ ವ್ಯಾಮೋಹದೆಡೆಯಲ್ಲಿ ಒಂದು ಕಿಚ್ಚು.ಇಂತೀ ಐದು ಕಿಚ್ಚನಿಕ್ಕಿಬಾಯಲ್ಲಿ ಮಣ್ಣಹೊಯಿದು ಕೆಡಿಸಿದೆ! ರಾಮನಾಥ.
ನೆರೆದರೆ ಗಣಂಗಳು! ಹರದಡೆ ಕಂಚುಗಾರರು!ಲಿಂಗವ ಮಾರಿ ಉಂಬ ಭಂಗಾರರು!ತಮ್ಮ ತಳಿಗೆಯ ಕೊಂಡು ಹೋಗಿಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ?ರಾಮನಾಥ.
ನಿಜವುಂಡ ನಿರ್ಮಲದಲೊದಗಿದ ಜ್ಯೋತಿಯನುಮರಳಿ ಪ್ರಸಾದರೂಪು ತಾನಾಗಿನಿಜ ನಿಂದು ಬ್ರಹ್ಮಾಂಡ ಬೆಳಗಿ ತೋರುತ್ತದೆಮಹಾಪ್ರಸಾದಿಯಲ್ಲಿ ರಾಮನಾಥ.
ನಿಷೆ*ಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು?ಅದು ಪಟ್ಟಣವೆಂದೆನಿಸೂದು!ನಿಷೆ*ಯಿಲ್ಲದ ಭಕ್ತ ಪಟ್ಟಣದಲ್ಲಿದ್ದಡೂಅದು ನಟ್ಟಡವಿ ಕಾಣಾ! ರಾಮನಾಥ.
ನಾನೊಂದು ಸುರಗಿಯನೇನೆಂದು ಹಿಡಿವೆನು?ಏನ ಕಿತ್ತೇನನಿರಿವೆನು?ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
ನೀನೀಶನೀಯದೆ ಮಾನಿಸನೀವನೆ?ನೀನೀಸುವ ಕಾರಣ ಮಾನಿಸನೀವನು.ಆ ಮಾನಿಸನ ಹೃದಯದೊಳು ಹೊಕ್ಕುನೀನೀಸುವ ಕಾರಣದಿಂದನೀನೆ ಶರಣೆಂಬೆನಯ್ಯಾ, ರಾಮನಾಥ.
ನಿಡಿದೊಂದು ಕೋಲುವನು ಕಡಿದು ಎರಡ ಮಾಡಿಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿನಡುವೆ ಹೊಸದಡೆ ಹುಟ್ಟಿದ ಕಿಚ್ಚು ಹೆಣ್ಣೊ ಗಂಡೊ?ರಾಮನಾಥ.
ನಂಬಿ ನಚ್ಚಿದೆನೆಂದು ಮನವನಿಂಬುಗೊಡದಿರು.ಕಾಯದ ಮಾಯದ ಕಪಟ ಕರ್ಮ ಸಂಸಾರಕ್ಕೆತನು ಮನ ಧನದಲ್ಲಿ ನೆನಹುಳ್ಳವರಕನಸಿನಲ್ಲಿ ಅರಿಯ, ನಮ್ಮ ರಾಮನಾಥ.
ನಂಬಿದ ಚೆನ್ನನ ಅಂಬಲಿಯನುಂಡ.ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ.ಕುಂಭದ ಗತಿಗೆ ಕುಕಿಲಿರಿದು ಕುಣಿದ.ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.