ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದಡೆಅವರರಸಿಯ ಪಾರ್ವತಿಯ ಸತಿಯೆಂದು ಕಾಣಬೇಕು.ಅಲ್ಲಿ ಅನುಸರಣೆಯ ಕೊಟ್ಟು ಬೆರಸಿಮಾತನಾಡುವ ನರಕಿಗಳನೇನೆಂಬೆ, ರಾಮನಾಥ.
ಶ್ರೀ ಗುರು ಲಿಂಗ ಜಂಗಮಕ್ಕೆಅರ್ಥ ಪ್ರಾಣಾಭಿಮಾನವ ಕೊಟ್ಟುಅಹಂಕಾರವಳಿದಿಜಹಂತು ಪುರಾತನರ ಮನೆಯಲ್ಲಿಎತ್ತಾಗಿ ಹುಟ್ಟಿಸಯ್ಯಾ.ತೊತ್ತಾಗಿ ಹುಟ್ಟಿಸಯ್ಯಾ,ಬಾಗಿಲ ಕಾಯ್ದಿಪ್ಪಂತೆ ಸೊಣಗನಾಗಿ ಹುಟ್ಟಿಸಯ್ಯಾ,ಜಂಗಮಲಿಂಗವೇ ಶಿವನೆಂದು ನಂಬಿ ನಮಸ್ಕರಿಸುವಪುರಾತನರ ಮನೆಯ ಬೇಲಿಯಾಗಿ ಹುಟ್ಟಿಸಯ್ಯಾ.ರಾಮನಾಥ.
ಶಿವಭಕ್ತನು ಹೋಗಿ ತನ್ನೊಡಲಿಚ್ಛೆಗೆ ಭವಿಯಮನೆಯಲುಂಡನಾದಡೆಮಡೆಕೆಯ ಕೂಳ ತಿಂದ ತುಡುಗಣಿ ನಾಯಂತೆ ಆ ಭಕ್ತ.ಮೃಢ! ನೀನಿಲ್ಲದ ಮನೆಯ ಕೂಳುಹೊಲೆಯರ ಮನೆಯ ಅಡಗಿನಿಂದ ಕರಕಷ್ಟ ಕಾಣಾ,ರಾಮನಾಥ.
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ!ಅಂಬರಕ್ಕೆ ಗಡಿಗೆ ಬೋದಿಗೆಯಿಲ್ಲದಂತಿರಿಸಿದೆ!ಎಲೆ ಮೃಡನೆ! ನೀನಲ್ಲದೆ ಉಳಿದ ದೈವಂಗಳಿಗಹುದೆ?ರಾಮನಾಥ.
ಶಿವಪೂಜೆಯೆತ್ತ, ವಿಷಯದ ಸವಿಯೆತ್ತ;ಆ ವಿಷಯದ ಸವಿ ತಲೆಗೇರಿ ಶಿವಪೂಜೆಯ ಬಿಟ್ಟುವೇಶಿಯರ ಎಂಜಲ ಹೇಸದೆ ತಿಂಬದೋಷಿಗಳನೇನೆಂಬೆನೈ, ರಾಮನಾಥ.