ಛಲವನೆತ್ತಿಕೊಂಡ ಬಳಿಕ ಬಲುಹು ಸಲಿಸಲೇಬೇಕು. ತನ್ನ ಮನವ ತಾನರಿದು ಗೆಲಲೇಬೇಕು. ದೇವರೊಲವುಳ್ಳವರ ಕಂಡು ತಾನಾದೆನೆಂದೆಡೆ, ಛಲ ಸಲ್ಲದು ಕಂಡಯ್ಯಾ. ನೇಮವೆಂದಡೆ ಕಡೆ ಮುಟ್ಟಿಸಲೀಯೆ, ತಪ್ಪವಿಡಿವೆ ನೀನು. ಇದು ಕಾರಣ, ನಾನೇನು ಪೆರತೊಂದನರಿಯದಂತಿರಿಸೆನ್ನ, ಸಕಳೇಶ್ವರದೇವಾ.
ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ ಹಿಡಿದುಬಿಡೆನೆಂಬ. ಛಲವಿರಬೇಕು ನಿತ್ಯನೇಮದಲ್ಲಿ ಹಿಡಿದು ಬಿಡೆನೆಂಬ. ಛಲವಿರಬೇಕು ಶೀಲವ್ರತದಲ್ಲಿ ಹಿಡಿದು ಬಿಡೆನೆಂಬ. ಛಲವಿರಬೇಕು ನಮ್ಮ ಅಖಂಡೇಶ್ವರಲಿಂಗವ ಕೂಡಿ ಎಂದೆಂದೂ ಅಗಲಬಾರದೆಂಬ ನೈಷೆ*ಯಲ್ಲಿ.