ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಷಡುರುಚಿಪದಾರ್ಥಂಗಳ ಇಷ್ಟಲಿಂಗಕೆ ತೋರಿ, ಪ್ರಾಣಲಿಂಗದಲ್ಲಿ ಕೂಡಿ, ಭಾವಲಿಂಗದಲ್ಲಿ ತೃಪ್ತಿಯನೆಯ್ದಿ, ಸವಿಯಬಲ್ಲಾತನೆ ನಿರ್ಮಲ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಷಡಕ್ಷರ ಶಕ್ತಿ ಯುಕ್ತವಾಗಿ ಷಡುಸಾದಾಖ್ಯಮೂರ್ತಿ ಸಂಪೂರ್ಣವಾಗಿ ಶರಣನ ಷಡಂಗದಲ್ಲಿ ಸದಾ ಸನ್ನಹಿತನಾಗಿ ಸರ್ವ ಸರ್ವಜ್ಞ ಸರ್ವೇಶ ಸರ್ವಾನಂದಮಯ ಷಟ್‍ಸ್ಥಲಬ್ರಹ್ಮಮೂರ್ತಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಷಟ್‍ತ್ರಂಶತತ್ವಂಗಳೆ ದೇಹವಾಗಿ ಪರಶಿವನದರ್ಕೆ ದೇಹಿಯಾಗಿರ್ಪನಾಗಿ ತತ್ವಮಯವಾದ ಭಕ್ತನಂಗದಲ್ಲಿ ಪ್ರಾಣಮಯವಾದ ಶಿವನಿಪ್ಪನಯ್ಯಾ. ತತ್ವಂಗಳು ಆ ತತ್ವಂಗಳನೆಯ್ದುವಲ್ಲಿ ಭಕ್ತನು ಜ್ಞಾನಕಾಯವಾಗಿಪ್ಪನಯ್ಯಾ. ಆ ಕಾಯದಲ್ಲಿ ಕಳಾಸ್ವರೂಪವಾಗಿಪ್ಪನಯ್ಯಾ ಶಿವನು. ಇಂತು ಆವಾಗಲೂ ಅಗಲನಾಗಿ ಭಕ್ತದೇಹಿಕನಯ್ಯಾ. ನಮ್ಮ ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಷಡೀಂದ್ರಿಯ ಸಪ್ತಧಾತುಗಳಲ್ಲಿ ಸಂಭ್ರಮಿಸಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ಷಡ್‍ಭೂತ ಷಟ್‍ಚಕ್ರಂಗಳಲ್ಲಿ ಇಡಿದು ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ತನುತ್ರಯ ಮನತ್ರಯ ಭಾವತ್ರಯಂಗಳಲ್ಲಿ ಭರಿತವಾಗಿರ್ಪುದು ಒಂದೇ ಪರವಸ್ತುವೆಂದರಿಯರು. ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ವಿಪರೀತ ಭ್ರಾಂತಿಜ್ಞಾನದಿಂದೆ ಒಳಗೆ ಬೇರೆ ಪರವಸ್ತು ಉಂಟೆಂದು ಕಣ್ಣಮುಚ್ಚಿ ನೋಡಿ ಕಳವಳಗೊಂಡು ಪ್ರಳಯಕ್ಕೊಳಗಾಗಿ ಹೋದವರ ಕಂಡು ನಗುತಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಷಟ್‍ಸ್ಥಲ ಮುಂತಾದ ಪಂಚವಿಂಶತಿತತ್ವ, ಏಕೋತ್ತರಶತಸ್ಥಲ ಮುಂತಾದ ಕ್ರಿಯಾಧರ್ಮಂಗಳಲ್ಲಿ ಆಚರಿಸುವುದು ಪೂರ್ವಕಕ್ಷೆಯ ಭೇದ. ಉತ್ತರಕಕ್ಷೆಯಲ್ಲಿ ಲಕ್ಷಿಸಿ ನೋಡಿಹೆನೆಂದಡೆ, ದ್ವೈತಾದ್ವೈತಂಗಳ ತಿಳಿದು, ಸಕಲ ನಿಃಕಲವ ವಿಚಾರಿಸಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳ ಕಂಡು, ಇಷ್ಟಕಾಮ್ಯಮೋಕ್ಷಂಗಳ ಗೊತ್ತಗೆಟ್ಟು ತೂರ್ಯಾತುರೀಯವೆಂಬವ ಪರಿಹರಿಸಿ, ತೀತ ಅತೀತವಪ್ಪುದನು ಕುರುಹಿಟ್ಟು, ಸುರಾಳ ನಿರಾಳ ನಿರವಯಸ್ಥಾನವ ಭೇದಿಸಿ ವೇದಿಸಿ, ಘೃತಪಾನವ ಸ್ವೀಕರಿಸಿದ ನಾಲಗೆಯಂತೆ ಬಂಧವಿಲ್ಲದೆ ತತ್ವಮಸಿಯೆಂಬ ಬ್ಥಿತ್ತಿಯ ಮೆಟ್ಟದೆ ಜಲವ ಹೊಯಿದಡೆ ಆ ಜಲಕ್ಕೆ ಆಯುಧದ ಕಲೆದೋರದಂತೆ ನಿಂದ ನಿಜದೊಳಗು ಉತ್ತರಕಕ್ಷೆಯ ಭೇದ. ಇಂತೀ ಉಭಯಕಕ್ಷೆಯಲ್ಲಿ ರಾಗವಿರಾಗವನರಿದು, ನಿಶ್ಶಬ್ದ ನಿರ್ಲೇಪವಾಗಿ ಸದ್ಯೋಜಾತಲಿಂಗವ ಕೊಡಬೇಕು.
--------------
ಅವಸರದ ರೇಕಣ್ಣ
ಷೋಡಶಕಳೆಯುಳ್ಳ ಜಂಗಮವ ರಾಜರುಗಳು ಪೂಜೆಯ ಮಾಡುವರು. ವಿಷಯವುಳ್ಳ ಜಂಗಮವ ವೇಸಿ ಪೂಜೆಯ ಮಾಡುವಳು. ರಸವಿದ್ಯೆಯುಳ್ಳ ಜಂಗಮವ ಅಕ್ಕಸಾಲೆ ಪೂಜೆಯ ಮಾಡುವನು. ವೇಷವುಳ್ಳ ಜಂಗಮವ ಭಕ್ತರು ಪೂಜೆ ಮಾಡುವರು. ಜ್ಞಾನವುಳ್ಳ ಜಂಗಮವ ಆರಿಗೂ ಕಾಣಬಾರದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾದ್ಥಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಷೋಡಶದಳಕಮಲದಲ್ಲಿ ನೋಡಬಾರದ ವಸ್ತುವ ಕಂಡೆ; ಅದು ಶತಕೋಟಿ ಸೋಮಸೂರ್ಯರು ಉದಯವಾದಂತಿದೆ ನೋಡಾ. ನೋಡಬಾರದ ವಸ್ತುವ ಕೂಡಿ ಅಬ್ಥಿನವ ಶಿವಪ್ರಸಾದಿಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಷಣ್ಮುದ್ರೆಗಳಿಂದತ್ತತ್ತ ಮಹಾಘನ ಪರಾಪರಜ್ಞಾನ, ಅಗೋಚರ ಅಪ್ರಮಾಣ ನಿಷ್ಪತಿ ನಿರಾಳ ನಿರವಯಲಿಂಗವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಷಡುರುಚಿಯನರಿವನ್ನಕ್ಕ ಬೇಟದ ಚುನ್ನ ಬಿಡದು. ಬೇಟ ಬಲಿದ ಮತ್ತೆ ಕೂಟಕ್ಕೆ ಸಮೀಪ. ಸಂಭೋಗದ ಸುಖ ಮೈಯುಂಡವಂಗೆ, ಲೋಕದ ನಚ್ಚು ಮಚ್ಚಿನ ಬಲೆದೊಡಕು ತಪ್ಪದು. ಇನಿತುಳ್ಳನ್ನಕ್ಕ ನಿರಂಗ ನಾನೆಂಬ ಮಾತು ಸಟೆ. ಇನಿತುಳ್ಳ ಅನಂಗಸಂಗಿಗಳಿಗೆ ಭಕ್ತಿ ವಿರಕ್ತಿ ಎಲ್ಲಿಯದೊ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ?
--------------
ಮೋಳಿಗೆ ಮಹಾದೇವಿ
ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ ಅವರನೇನೆಂಬೆನಯ್ಯಾ ? ಆವ ಭಾವದಲ್ಲಿ ಆವ ಮುಖದಲ್ಲಿ ಆವ ಜ್ಞಾನದಲ್ಲಿ ಆವರನಯ್ಯಯೆಂಬೆನು ? ನಿಮ್ಮಲ್ಲಿ ಸಮ್ಯಕ್ಕಾದ ಸತ್ಯಶರಣರ ಅವರನಯ್ಯಯೆಂಬೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಷಡಾಧಾರದಲ್ಲಿ ಅಡಿಗದಿ ಹೋಹವರ ಕಂಡೆ. ತತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋಹವರ ಕಂಡೆ. ಮಾತಿನ ಬ್ರಹ್ಮವನಾಡಿ ವಸ್ತುವನರಿಯದೆ, ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವನರಿತೆಹೆವೆಂದು ಘಟ ಕೆಟ್ಟು ನಷ್ಟವಾದವರ ಕಂಡೆ. ಇಂತಿವನರಿದು ಕರ್ಮಯೋಗವ ಮಾಡದೆ, ವರ್ಮಂಗಳನರಿದು ಸರ್ವಗುಣಸಂಪನ್ನನಾಗಿ, ತನ್ನ ತಾನರಿದ ಮತ್ತೆ ಮಹಾತ್ಮಂಗೆ, ತನಗೆ ಏನೂ ಅನ್ಯಭಿನ್ನವಿಲ್ಲ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವು ತಾನಾದವಂಗೆ.
--------------
ಸೂಜಿಕಾಯಕದ ಕಾಮಿತಂದೆ
ಷಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು ಮಾತೆ ಹೆತ್ತು ಹೆಸರಿಟ್ಟುದೈ ಅಕ್ಷರಾಂಕ. ಆರುವನು ಐದುವನು ಮೇಲಿಪ್ಪ ಮೂರುವನು ಕೂಡಿ ಹದಿನಾಲ್ಕರೊಳು ಲೋಕವಾಗಿ, ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ ಅನೇಕ ಪರಿಯಿಂ ಮಾತೆ ಬಸವಾಕ್ಷರ. ನೀನಾದಿಮುಖ ಶೂನ್ಯನಾಗಿಪ್ಪ್ಲ ನಿನ್ನುವನು ಖ್ಯ್ಕಾಮಾಡಿದ ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಷಡೂರ್ಮಿಯಿಲ್ಲ ಷಡ್ವರ್ಗವಿಲ್ಲ ನಾನೆಂಬುದಿಲ್ಲ ನೀನೆಂಬುದಿಲ್ಲ. ಏನೆಂಬುದೇನೂ ಇಲ್ಲದಿಹುದೆ, ಚಿದಹಂಕಾರದ ಲಿಂಗೈಕ್ಯವಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಷಡುರುಚಿಪದಾರ್ಥಂಗಳ ಇಷ್ಟಲಿಂಗಕೆ ತೋರದೆ ಬಾಯಿಗೆ ಬಂದಂತೆ ತಿಂಬ ನರಕಿಗಳ ಕಂಡು, ನಮ್ಮ ಶಿವಶರಣರು ಮೆಚ್ಚುವರೇನಯ್ಯ ? ಅಂತಪ್ಪ ನರಕಿ ಕೀಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...
-->