ರಸ ಉಂಬಲ್ಲಿ, ಗಂಧ ವಾಸಿಸುವಲ್ಲಿ,
ರೂಪು ನಿರೀಕ್ಷಣೆಯಲ್ಲಿ, ಶಬ್ದ ಗೋಚರದಲ್ಲಿ,
ಸ್ಪರ್ಶ ತ್ವಕ್ಕಿನಲ್ಲಿ, ಪಂಚಪುಟ ಭೇದಂಗಳಲ್ಲಿ,
ಅಷ್ಟಗುಣ ಮದಂಗಳ ಪಟ್ಟಣದ,
ಷೋಡಶದ ರೂಡ್ಥಿಯ ಷಡ್ಚಕ್ರದ ಆಧಾರದ,
ಪಂಚವಿಂಶತಿಯ ನಿಳೆಯದ ಸಂಚಾರದ,
ನವಕವಾಟದ, ತ್ರಿಶಕ್ತಿ ಸಂಪದದ,
ತ್ರಿಗುಣಾತ್ಮನ ತ್ರಿಗುಣ ಓಹರಿಯಲ್ಲಿ ಬಳಸಿಪ್ಪ
ಬಂಧದಲ್ಲಿ ಮಗ್ನವಾಗದೆ,
ಜಾಗ್ರ [ಸ್ವಪ್ನ] ಸುಷುಪ್ತಿ ತ್ರಿವಿಧ ಘಟಪಟಲ
ತತ್ವನಿರಸನ ನಿರ್ವಿಕಾರನಾಗಿ,
ಇಂತಿವರಲ್ಲಿ ಅವಘಾನವಾಗಿ ಮುಳುಗದೆ,
ನೀರನಿರಿದ ಕೈದಿನಂತೆ ಕಲೆದೋರದೆ,
ಆವ ಸುಖಂಗಳಲ್ಲಿ ಅಬ್ಥಿನ್ನವಾಗಿ,
ಜಲದೊಳಗಣ ಶಿಲೆ, ಶಿಲೆಯೊಳಗಣ ವಹ್ನಿ
ಸುಳುಹುದೋರದ ತೆರ,
ಮಥನಕ್ಕೆ ಕಂಡು, ಕಾಣದಡಗಿಪ್ಪ ತೆರ,
ಲಿಂಗಾಂಗಿಯ ಇರವು.
ಇದು ಸಿದ್ಧವಾಗಬೇಕು, ಶರೀರದ ಗುಡಿಯೊಡೆಯ
ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ.
ಇದೇ ಅಂಜನಸಿದ್ಧಿ.