ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನವ ಮಾಡಲಾಗಿ,
ಲಿಂಗತೀರ್ಥವಾಯಿತ್ತು.
ಜಂಗಮದ ಪ್ರಸಾದವ ಲಿಂಗಕ್ಕರ್ಪಿಸಲಾಗಿ, ಲಿಂಗಪ್ರಸಾದವಾಯಿತ್ತು.
ಶುದ್ಧ ಗುರುವಿನಲ್ಲಿ, ಸಿದ್ಧ ಲಿಂಗದಲ್ಲಿ, ಪ್ರಸಿದ್ಧ ಜಂಗಮದಲಾದ ಮತ್ತೆ ,
ಸಿಕ್ಕಿತ್ತು ಪ್ರಸಿದ್ಧ ಸಂಖ್ಯೆಯಲ್ಲಿ.
ಇದನರಿತು ಅರ್ಪಿಸಬಲ್ಲಡೆ, ಆತನೇ ಪ್ರಸಾದಕಾಯ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಅರ್ಪಿತ ಅವಧಾನಿ.