ಆರುಸ್ಥಲವಿಟ್ಟು ಬೇರೆ ಕರೆದ ಭಾವವಾವುದಯ್ಯಾ ?
ಸಕಲಗುಣಂಗಳನರತು,
ಸರ್ವಜೀವಕ್ಕೆ ದಯಾಪರನಾಗಿಪ್ಪುದು, ಭಕ್ತಿಸ್ಥಲ.
ಸಕಲದೇಹಭಾವಂಗಳಲ್ಲಿ ಕಲೆದೋರದಿಪ್ಪುದು, ಗುರುಸ್ಥಲ.
ಉತ್ಪತ್ಯ ಸ್ಥಿತಿ ಲಯಕ್ಕೆ ಹೊರಗಾದುದು, ಲಿಂಗಸ್ಥಲ.
ಆ ಮೂರ ಹೆರೆಹಿಂಗಿ ನಿಂದುದು, ಜಂಗಮಸ್ಥಲ.
ಆ ಚತುರ್ವಿಧವನೊಳಕೊಂಡದುದು, ಶರಣಸ್ಥಲ.
ಆ ಅಯಿದನವಗವಿಸಿ ನಿಂದುದು, ಐಕ್ಯಸ್ಥಲ.
ಇಂತೀ ಷಡುಸ್ಥಲದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯನೆಂದು ನಿಂದುದು, ಒಂದೆ ಸ್ಥಲ.
ಮರೆದು ಅರಿದಲ್ಲಿ ಆಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಷಡಂಗಲೇಪವಾಗಿ ಸ್ವಯಂಭುವಾಯಿತ್ತು.