ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ,
ಅಂಗಗುಣವರಿಯದೆ, ಲಿಂಗತ್ರಯವೆಂಬುದ ಸಂಘಟಿಸಲರಿಯದೆ,
ನಿಂದು ಕಾಬ ನೆಲೆಯಿನ್ನೆಂತು ? ಮಾತ ಕಂಡಾಡಿದಲ್ಲಿ ವಾಗದ್ವೈತಿ.
ಬಳಗನರಿದು ಪೂಜಿಸುವಲ್ಲಿ ಡಂಬಕಧಾರಿ.
ಏನ ಮುಟ್ಟಿದಲ್ಲಿ ಕೇಡಿಲ್ಲಾ ಎಂದು
ಮನ ಬ್ರಹ್ಮವನಾಡಿ, ಮನುಜರಂತೆ ಹರಿದಾಡುತ್ತ,
ಗಂಪವ ಕೂಡಿಕೊಂಡು, ಶಂಕೆಯಿಲ್ಲಾಯೆಂದು
ನಿಶ್ಶಂಕೆಯ ನುಡಿಯಬಹುದೆ ಅಯ್ಯಾ ?
ನಡೆ ನುಡಿ ಸಿದ್ಧಾಂತವಾದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ಅವರಲ್ಲಿ ಪ್ರಸಿದ್ಧವಾಗಿಪ್ಪನು.