ಶಿಲೆ ಕಾಷ*ದಲ್ಲಿ ಪಾವಕ ಜನಿಸುವ ಭೇದದಂತೆ,
ಮಾಡುವ ಸತ್ಕ್ರೀ ಭೇದ.
ಶಿಲೆಯ ವಹ್ನಿ ತಲೆದೋರಿ ಉಭಯವನುಳುಹಿದಂತೆ,
ಗುರು ಚರದ ಯುಕ್ತಿ.
ಕಾಷ*ದ ವಹ್ನಿ ತನ್ನಯ ಇರವ ಸುಟ್ಟು, ಹಲವು ಕಡೆಗೆ ಪರಿವಂತೆ,
ಆತ್ಮನ ಭೇದ.
ಇಂತೀ ನಾನಾ ವರ್ತಕಂಗಳಲ್ಲಿ ಕ್ರೀ ಶುದ್ಧವಾಗಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.