ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವಿಗೆ ರುಜೆಯಡಸಿದಲ್ಲಿ ಆತ್ಮಕ್ಕೆ ಅವಗಡೆ ಬಂದಿತ್ತು. ಅದು ಉಭಯದ ಕೇಡೊ ? ಒಂದರ ಕೇಡೊ ? ಎಂಬುದನರಿತಲ್ಲಿ , ಲಿಂಗ ಜಂಗಮದ ಪ್ರಸಾದವೊಂದೆಯಾಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಲಾಗಿ, ಸ್ವಯಂಭವಾಯಿತ್ತು.
--------------
ಶಿವಲೆಂಕ ಮಂಚಣ್ಣ
ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ, ಆಚಾರಕ್ಕೆ ಅರಿವೆ ಲಿಂಗವಾಗಿ, ಅರಿವೇ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು .
--------------
ಶಿವಲೆಂಕ ಮಂಚಣ್ಣ
ತರ್ವಾಯಕ್ಕೆ ಸಿಕ್ಕಿದಲ್ಲಿ ವೇದಾಂತಿಯಾದ. ಆಗುಚೇಗೆಯನಾಡೆಹೆನೆಂದು ಆಗಮಿಕನಾದ. ಹಿಂದುಮುಂದಣ ನಿಂದ ಹರಟೆಯ ಹೇಳಿಹೆನೆಂದು ಪುರಾಣಿಕನಾದ. ಇಂತಿವು ಪಂಚವಿಂಶತಿತತ್ವದ ಶಾಖೆಯಲ್ಲಿ ಅದ ಜಾಳಿಸುವ ವಾರ್ದಿಕ ಪರ್ಣ. ಇಂತಿವ ನೇತಿಗಳೆದು ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ತನುವಿನಲ್ಲಿ ಮನೋಮೂರ್ತಿಯಾಗಿ, ಜಿಹ್ವೆಯಲ್ಲಿ ರುಚಿಸುವವ ನೀನಾಗಿ, ಕರ್ಣದಲ್ಲಿ ಆದರಿಸಿ ಕೇಳುವವ ನೀನಾಗಿ, ನಯನದಲ್ಲಿ ಎವೆ ಹಳಚದೆ ನೋಡುವವ ನೀನಾಗಿ, ನಾಸಿಕದಲ್ಲಿ ಸುವಾಸನೆಯ ಗ್ರಹಿಸುವವ ನೀನಾಗಿ, ಪಾದ ಪ್ರಾಣಿಗಳಲ್ಲಿ ಸರ್ವಾಂಗಮುಖವಾಗಿ, ಸಕಲಸುಖಿಯಾಗಿ, ಭೋಗಮೂರ್ತಿಯಾದೆಯಲ್ಲಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ತಮಕ್ಕೂ ದಿವಕ್ಕೂ ಸೂರ್ಯನಾದ ಮತ್ತೆ, ದಿನ ಮಾಸಂಗಳೆಂಬವು ನಷ್ಟವಾಯಿತ್ತು. ಭಕ್ತನೂ ನಾನೆ, ವಿರಕ್ತನೂ ನಾನೆ ಎಂದಲ್ಲಿ, ಕೈಲಾಸದ ಬಟ್ಟೆ ಕಟ್ಟಿತ್ತು . ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಎತ್ತ ಹೋದರೆಂದರಿಯು.
--------------
ಶಿವಲೆಂಕ ಮಂಚಣ್ಣ
ತನುವಿಂಗೆ ಕುರುಹಾದಲ್ಲಿ, ಅರ್ಚನೆ ಆವರಿಸಬೇಕು. ಪೂಜೆ ಪುಣ್ಯವನರಿಯಬೇಕು. ಅರಿದರಿವು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕುರುಹಿಡಬೇಕು.
--------------
ಶಿವಲೆಂಕ ಮಂಚಣ್ಣ
ತುಷವಿದ್ದಲ್ಲಿ ಭತ್ತವಾಯಿತ್ತು, ತುಷ ಹೆರಹಿಂಗೆ ತಂಡುಲವಾಯಿತ್ತು, ತಂಡುಲ ದಗ್ಧವಾಗಿ ಬ್ರಹ್ಮವಾಯಿತ್ತು, ಈ ಗುಣ ಒಂದನೊಂದ ಬಿಟ್ಟು ನಿಂದುದನರಿತಲ್ಲಿ, ಜಂಗಮಪ್ರಸಾದ ಲಿಂಗಕ್ಕರ್ಪಿತ. ಈಶಾಮ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರಿತಲ್ಲಿಯೆ ಅರ್ಪಿತ.
--------------
ಶಿವಲೆಂಕ ಮಂಚಣ್ಣ
ತ್ರಿವಿಧಕ್ಕೆ ಮನ ಎಷ್ಟರಾಸೆ ಉಂಟು ಅಷ್ಟು ಬೇಕು ಗುರುಲಿಂಗಜಂಗಮವ ಪೂಜಿಸುವುದಕ್ಕೆ. ಬಾಳೆಗೆ ಫಲ ಕಡೆಯಾದಂತೆ, ಚೇಳಿಗೆ ಗರ್ಭವುದಯಿಸಿದಂತೆ, ಭಕ್ತಂಗೆ ಅಂದಂದಿಗೆ ಸಂದುದೆ ಸರಿಯಾಗಿ ನಿಂದ ಭಕ್ತನಿರವು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಿರವೆ ತಾನಾಗಿ.
--------------
ಶಿವಲೆಂಕ ಮಂಚಣ್ಣ