ರೂಪು ರುಚಿ ಚಿತ್ತ, ಈ ಮೂರು ಏಕವಾಗಿ ನಿಂದಲ್ಲಿ, ಲಿಂಗಾರ್ಪಿತ. ರೂಪ ಭಾವಿಸದೆ, ರುಚಿಯ ಭಿನ್ನವನರಿಯದೆ, ಚಿತ್ತದ ಗೊತ್ತ ಮುಟ್ಟದೆ, ಅದೆತ್ತಣ ಅರ್ಪಿತ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ?
ರಸವನರಿವುದಕ್ಕೆ ಜಿಹ್ವೆಯಾಗಿ ಬಂದು, ಗಂಧವನರಿವುದಕ್ಕೆ ನಾಸಿಕವಾಗಿ ಬಂದು, ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು, ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು, ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು, ಇಂತೀ ಘಟದ ಮಧ್ಯದಲ್ಲಿ ನಿಂದು ಪಂಚವಕ್ತ್ರನಾದೆಯಲ್ಲಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.