ಹಲವಾಡುವಂತೆ ಕೆಲೆದಾಡಲಿಲ್ಲ.
ಕಂಡವರ ಕಂಡು, ಕೈಕೊಂಡು,
ಅವರು ನಿಂದನಿಂದ ವ್ರತಕ್ಕೆ ತಾ ನಿಂದೆಹೆನೆಂದು ಕೊಂಡಾಡಲಿಲ್ಲ.
ಕೂಲಿಗೆ ಹಾವ ಕಚ್ಚಿಸಿಕೊಂಡಡೆ, ಆದಾರ ಹರಣವಳಿವುದು ?
ತನು ಶುದ್ಧತೆಯಿಲ್ಲದೆ, ಮನ ಆಚಾರದ ಅನುವನರಿಯದೆ,
ನಡೆವರ ಬೆಂಬಳಿಯಲ್ಲಿ
ಗುಡಿಗಟ್ಟಿ ಹರಿದಾಡುವ ಸುರಿಗುಡಿಗಳನೊಪ್ಪ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.