ಎ ಪದದಿಂದ ಪ್ರಾರಂಭವಾಗುವ ವಚನಗಳು:
ಎಂಜಲಮಾತ ನುಡಿವುತ್ತಿಪ್ಪಜಗದ ಜಂಗುಳದೊಳಗಿದಡೆ ಶೀಲವಂತನೆ ?ಬ್ಥಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು,ಮಕರಶೃಂಗಾರವ ಮಾಡಿದಡೆ ಮಹಂತನೆ ?ಲಿಂಗಶೃಂಗಾರವ ಮಾಡಿ,ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು.ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ,ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ.
ಎನ್ನ ಈ ಸಂಸಾರದ ಬಾಳುವೆ ನೆಲೆಯಿಲ್ಲ ಕಂಡಾ !ಆದಡೆ, ಶಿವನೆ ನೀನು ಕಾಡುವ ಕಾಟ ನೆಲೆಯಿಲ್ಲ.ಸಂಸಾರದ ಕೂಡೆ ಕಾಡುವುದು ಲಯ.ಇಂತೀ ಎರಡೂ ಲಯವಾದಡೆನಾನು ನೀನೂ ಕೂಡಿ ನಿತ್ಯರಾಗಿ ಸುಖಿಯಿಸುವ, ಸಕಳೇಶ್ವರದೇವಾ.
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು,ನಿನಗೆ ಕೊಡುವೆನೆಂದವಧಾನಿಸುವನ್ನಬರ,ಎನಗೂ ಇಲ್ಲದೆ ಹೋಯಿತ್ತು , ನಿನಗೂ ಇಲ್ಲದೆ ಹೋಯಿತ್ತು .ಈ ಭೇದಬುದ್ಧಿಯು ಬಿಡಿಸಿ,ಆನರಿದುದೆ ನೀನರಿದುದೆಂಬಂತೆ ಎಂದಿಂಗೆನ್ನನಿರಿಸುವೆ ಸಕಳೇಶ್ವರಾ.
ಎನ್ನ ಮನದಲ್ಲಿ ದಿಟವಿಲ್ಲ , ಪೂಜಿಸಿ ಏವೆನು ?ಹೃದಯದಲ್ಲೊಂದು, ವಚನದಲ್ಲೊಂದು ಎನಗೆ ನೋಡಾ.ಎನ್ನ ಕಾಯ ಭಕ್ತ , ಮನ ಭವಿ ಸಕಳೇಶ್ವರದೇವಾ.
ಎನಗೆ ನೀನು ಮಾಡಿದ ಸಂಸಾರದ ಬಳಲಿಕೆ, ನಿನಗೆನ್ನ ಕಾಡುವ ಬಳಲಿಕೆ.ಬಳಲಿಕೆಯಿಬ್ಬರಿಗೆಯೂ ಸರಿ.ನಿನ್ನ ಹೆಚ್ಚೇನು ? ಎನ್ನ ಕುಂದೇನು ?ನೀನು ಭಕ್ತದೇಹಿಕದೇವನಾದ ಬಳಿಕ !ಸಕಳೇಶ್ವರದೇವ ನೀನೂ ಬಲ್ಲೆ , ನಾನೂ ಬಲ್ಲೆ .
ಎಲವದ ಎಕ್ಕೆಯ ಬರ್ಬೂರದಕಾಗೆ ಗೂಗೆಗರಿಯ ಸೂವಾರವೆಯ ಪರಮಾಣುಗಳಕಲ್ಲಮೇಲೆ ಬೆಳೆದಿಹ ಹುಲ್ಲುಕಡ್ಡಿಯ ಸೋಂಕುಗಳ ಬೇಡಿಬಾಳುವ ಮಾನವನಂತೆ ಬೇಡಿ ನಿಂದವು.ಇಂತುಟನರಿತು, ವಿರಕ್ತಿಯಿಂದ ಸಕಳೇಶ್ವರದೇವಾ ಶರಣೆಂದಡೆ,ನಿಜಪದವ ಕೊಡುವುದಕ್ಕೆ ಸಂದೇಹಬೇಡ.