ಮನಮನವೇಕಾರ್ಥವಾಗದವರಲ್ಲಿ, ತುನುಗುಣ ನಾಸ್ತಿಯಾಗದವರಲ್ಲಿ.
ಶೀಲಕ್ಕೆ ಶೀಲ ಸಮಾನವಾಗದವರಲ್ಲಿ, ಬುದ್ಧಿಗೆ ಬುದ್ಧಿ ಕೂಟಸ್ಥವಾಗದವರಲ್ಲಿ.
ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ, ಅವರೊಡನೆ ಕುಳ್ಳಿರಲಾಗದು.
ಗಡಣದಲ್ಲಿ ಮಾತಾಡಲಾಗದು,
`ಸಂಸರ್ಗಜಾ ದೋಷಗುಣಾ ಭವಂತಿ'
ಎಂದುದಾಗಿ, ಮಹಂತ ಸಕಳೇಶ್ವರದೇವಾ,
ನಿಮ್ಮ ಸಾತ್ವಿಕಸದ್ಭಕ್ತಿಯನರಿಯದವರ ಸಂಗದಿಂದ
ಕೈಲಾಸಕ್ಕೆ ದೂರವಾಗಿಪ್ಪರು.