ಯ ಪದದಿಂದ ಪ್ರಾರಂಭವಾಗುವ ವಚನಗಳು:
ಯತಿಗೆ ಲಾಂಛನವೇಕೆ? ಶುಚಿಗೆ ಮೂದಲೆಯೇಕೆ ?ಕಲಿಗೆ ಕಜ್ಜವೇಕೆ? ಒಲವಿಂಗೆ ರೂಹೇಕೆ ?ದಿಟವುಳ್ಳ ಮನಕ್ಕೆ ಆಚಾರವೇಕೆ ?ಸಜ್ಜನಸ್ತ್ರೀಗೆ ಬೇರೆ ನೋಂಪಿಯೇಕೆ?ಭೃತ್ಯಾಚಾರವಿಂಬುಗೊಂಡವರ ಮನವ,ಮಹಂತ ಸಕಳೇಶ್ವರದೇವನೆ ಬಲ್ಲ.
ಯೋಗಿ, ಜೋಗಿ, ತಪಸಿ, ಸನ್ಯಾಸಿ,ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ.ತೋರಿ, ಮಾರಿಯುಂಬು ಬೆವಹಾರಗಳು!ನಿರ್ಣಯ ನಿರ್ಲೇಪಭಕ್ತಿ ಯುಳ್ಳವರನಲ್ಲದೊಲ್ಲ,ಸಕಳೇಶ್ವರದೇವ.