ಜ್ಞಾನವಿಲ್ಲದ ಕ್ರೀಯ ಮಾಡಿದಲ್ಲಿ ಫಲವೇನಯ್ಯ ? ಆ ಜ್ಞಾನವು ಕ್ರೀಯನು ಸಂಬಂಧಿಸಲು ಸಂಬಂಧ ಸ್ವಯವಾಯಿತ್ತಯ್ಯ. ಅಪ್ರಮಾಣದ ಪ್ರಕಾಶವ ಕಂಡು ಅರುವನರಿದು ತಿಳಿಯಲು ಸಂಗಯ್ಯನಲ್ಲಿ ಪ್ರಸಾದಿಯಾದೆನಯ್ಯ.
ಜನನ ಮರಣವಳಿದು, ಜಲ್ಮದೊಪ್ಪವ ಕಳೆದು, ಪ್ರಸನ್ನಮೂರ್ತಿಯ ಕಂಡು ಪ್ರಭಾಪೂರಿತ ಸ್ವರೂಪವಾಗಿ, ಮನೋವಿಲಾಸದ ಹಂಗ ಹರಿದು, ಅಂಗ ಲಿಂಗ ನಿಜವು ಮೂರ್ತಿಯಾಗಿ ಹೊಳೆಯಲು ಸಂಗ ಸಂಬಂಧ ಶಿವಾನುಕೂಲತೆಯಾಯಿತ್ತಿಂದು ಸಂಗಯ್ಯ.