ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಯೋನಿಯಿಲ್ಲದ ಸ್ತ್ರೀಗೆ ಶಿಶ್ನವಿಲ್ಲದ ಪುರುಷನು. ಮೊಲೆ ಮುಡಿ ಇಲ್ಲದ ಸ್ತ್ರೀಗೆ ಕೈಕಾಲು ಇಲ್ಲದ ಪುರುಷನು. ಇಬ್ಬರ ಸಂಗದಿಂದ ಕರುಳಿಲ್ಲದ ಶ್ವೇತವರ್ಣದ ಶಿಶುವು ಹುಟ್ಟಿತ್ತು. ಆ ಶಿಶುವು ನೋಡಿದವರ ನೋಟದಲ್ಲಿ ಸತ್ತು ಬದುಕಿದವರ ಹೊತ್ತು, ಅತ್ತವರ ನುಂಗಿ, ಹೆತ್ತವರ ಹೆಸರ ಮಾಜಿ ಗುಹೇಶ್ವರನ ಚರಣದಲ್ಲಿ ಅಡಗಿತ್ತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಯೋಗದ ಹೊಲಬ ಸಾಧಿಸಬಾರದು. ಯೋಗವೆಂಟರ ಹೊಲಬಲ್ಲ. ಯೋಗ ಒಂಬತ್ತರ ನಿಲವಲ್ಲ. ಯೋಗವಾರರ ಪರಿಯಲ್ಲ. ಧರೆಯ ಮೇಲಣ ಅಗ್ನಿ ಮುಗಿಲ ಮುಟ್ಟದಿಪ್ಪಡೆ ಯೋಗ. ಮನದ ಕಂಗಳ ಬೆಳಗು ಸಸಿಯ ಮುಟ್ಟಿದೆನೆನ್ನದೆ ಘನವ ಮನವನೊಳಕೊಂಡಡದು ಯೋಗ. ವನಿತೆಯರರಿವರನು ಪತಿಯೊಮ್ಮೆ ಕೂಡಿ ತಳುವಳಿದಿರಬಲ್ಲಡದು ಯೋಗ. ಘನಮಹಿಮ ಪ್ರಭುವಿನ ಸಮರಸ ಯೋಗವ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ಯತಿಗುಣದ್ವೇಷ, ಸಮಯಗುಣದ್ವೇಷ, ಆಚಾರಗುಣದ್ವೇಷ, ಸಕಲಶಾಸ್ತ್ರಯುಕ್ತಿಗುಣದ್ವೇಷ, ಸಮತೆಗುಣ ಶಾಂತಿಯಲ್ಲಿ ನಿಂದು ವಿರಕ್ತಿದ್ವೇಷ. ಇಂತೀ ದ್ವೇಷನಾಮನಷ್ಟವಾಗಿ ಸ್ವಯಂಭುವಾಗಿ ನಿಂದುದು, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಯಾಂತ್ರಿಕನ ಯಂತ್ರಮಂತ್ರ ಸಂಬಂಧದಿಂದ ಪಿಶಾಚಗ್ರಸ್ತನ ಪಿಶಾಚಿಯು ಫಲಾಯನವಪ್ಪ ತೆರನಂತೆ, ಶ್ರೀಗುರುವಿನ ಶಿವಮಂತ್ರ ಶಿವಲಿಂಗ ಸಂಬಂಧದಿಂದ ಮನುಜನ ಮಾಯಾಗ್ರಹವು ತೊಲಗುವುದಯ್ಯಾ. ಗಿಡಮರಬಳ್ಳಿಗಳ ನಾರುಬೇರುಗಳ ಶರೀರದೊಂಡೆಯಲ್ಲಿ ಧರಿಸಿದಡೆ ರೋಗಿಯ ಹಲವು ರೋಗಗಳು ನಷ್ಟವಪ್ಪ ಪರಿಯಂತೆ ಇಷ್ಟಲಿಂಗವನಂಗದಲ್ಲಿ ಸಂಗಗೊಳಿಸುವುದರಿಂದ, ಭವಿಯ ಭವ ಕೆಟ್ಟು, ಕೂಡಲಚೆನ್ನಸಂಗಯ್ಯನ ಕಾರುಣ್ಯಕ್ಕೆ ಪಕ್ಕಾಗುವನಯ್ಯಾ
--------------
ಚನ್ನಬಸವಣ್ಣ
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ.
--------------
ಬಸವಣ್ಣ
ಯೋಗಭೂಷಣ, ನಿಮ್ಮ ಆ ಅಕ್ಷರಭೇದ ಆದಿಯಾಧಾರಂಗಳಿಲ್ಲದಂದು, ಆನಂದಸ್ಥಾನದಲ್ಲಿಪ್ಪ ಗುರು ಬಸವಣ್ಣ, ತಾನೆನ್ನ ಕರುಣಂ ನಿತ್ಯನೆನಿಸಿ; ಯೋಗಸಿದ್ಧಾಂಗದಲ್ಲಾದ ಪಂಚಬ್ರಹ್ಮದಿಂ ದಾಗಾದೆನೈ ಚೆನ್ನಬಸವ ತಂದೆ; ಯೋಗಮೂರುತಿಯೆ ನೀನೆನ್ನ ಗುರುವಾಗಿ ಶಿವಯೋಗಿಯಾನಾದೆನಯ್ಯಾ. ನಿನ್ನವರ ಹೊರೆಗೈದೆ ಯೋಗಿಗುರು ಪ್ರಭುರಾಯ ನಾ ನಿಮ್ಮ ಕರುಣಲ್ಲಿ ಶಿವಯೋಗಮುದ್ರೆಯನೆ ನೆನೆದು ಸುಖಿಯಾದೆನೈ ಆಗಮಕ್ಕೊಳಗಾದ ಆಗಮಕೆ ಹೊರಗಾದ ಆನಂದಸ್ಥಾನದ ಸ್ವಯವಾದೆನೈ ದೇವ ಯೋಗಜ್ಞಾನ ಕಪಿಲಸಿದ್ಧಮಲ್ಲಿನಾಥನ ಕರುಣ ನಿಮಗಾಯಿತ್ತು, ಶ್ರೀಗುರು ಚೆನ್ನಬಸವಣ್ಣ ತಂದೆ.
--------------
ಸಿದ್ಧರಾಮೇಶ್ವರ
ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ; ಸನ್ಯಾಸಿಯಲ್ಲ; ಕಾಳಾಮುಖಿಯಲ್ಲ; ಪಾಶುಪತಿಯಲ್ಲ; ಈ ಷಡುದರುಶನಂಗಳಾಚರಣೆಯಲ್ಲ. ಶರಣನಾಚರಣೆ ಬೇರೆ. ಆದಿಶೈವ, ಮಹಾಶೈವ, ಅನುಶೈವ, ಅಂತರಶೈವ, ಪ್ರವರಶೈವ, ಅಂತ್ಯಶೈವವೆಂಬ ಈ ಆರುಶೈವದ ನೀತಿಯಲ್ಲ. ಇಂತಿವೆಲ್ಲರ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತ. ಶುದ್ಧ, ವಿಶೇಷ, ನಿರ್ವಾಣವೆಂದು ವೀರಶೈವ ಮೂರುತೆರನಾಗಿಪ್ಪುದು. ಆ ಮೂರು ತಾನೆ ಆರುತೆರನಾಗಿ ತೋರಿತ್ತದೆಂತೆಂದೊಡೆ: ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದು. ಇಂತೀ ಆರುಪ್ರಕಾರದಲ್ಲಿ ವರ್ತಿಸುತ್ತಿಹುದು ವೀರಶೈವ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಯುಗಜುಗಂಗಳು ಮಹಾಪ್ರಳಯವಾದಲ್ಲಿ ಉಳಿಯಿತ್ತೊಂದು ಮಲಯಜದ ಬೇರು. ಬೇರಿನಲ್ಲಿ ಮಣ್ಣು ಸಿಕ್ಕಿ, ಮಣ್ಣಿನ ಸಾರಕ್ಕೆ ಬೇರು ಚಿಗಿತು, ಮೂರು ಕೊನರಾಯಿತ್ತು. ಮೂರು ಕೊನರು ಬಲಿದು, ಐದು, ಕೊಂಬಾಯಿತ್ತು. ಐದು ಕೊಂಬಿನ ತುದಿಯಲ್ಲಿ ಆರೆಲೆ ಚಿಗಿತು, ಆರೆಲೆಯ ಅಡಿಯಲ್ಲಿ ಮೂರು ಹೂದೋರಿತ್ತು. ಹೂ ಮೀರಿ ಬಲಿವುದಕ್ಕೆ ಮೊದಲೆ, ಮರ ಬಲಿದು ಹಣ್ಣಾಯಿತ್ತು. ಹಣ್ಣಿನ ಬೀಜ ರಸವನುಂಡು, ಕಾದಿದ ಅಣ್ಣಂಗೆ ಇಲ್ಲವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ನಿಃಪತಿಯನೈದಿದ ಕಾರಣ.
--------------
ಸಗರದ ಬೊಮ್ಮಣ್ಣ
ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ. ಕಲಿಗಳ ಛಲಿಗಳ ಬಲುಹ ಮುರಿಯಿತ್ತು ಮಾಯೆ. ಹರಿ ಬ್ರಹ್ಮ ರುದ್ರಾದಿಗಳೆಲ್ಲರ ತರಕಟ ಕಾಡಿತ್ತು ಮಾಯೆ. ಹೋ! ಹೋ!! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಮಾಯಾಮರ್ಕಟ ವಿಧಿಯೇ!
--------------
ಚಂದಿಮರಸ
ಯೋಗಭೂಷಣನೆ, ನಿಮ್ಮ ನೆರೆಯಲು ಬೇಕು ಬೇಕೆಂಬ ಸದ್ಭಕ್ತರ ಮನದ ಕೊನೆಯಲ್ಲಿ ತಿಳುಹುವೆ ಅಕ್ಷರವ. ಬಸವ ಬಸವ ಬಸವ ಎಂಬ ಮಧುರಾಕ್ಷರತ್ರಯದೊಳಗೆ ತಾನೆ ತೆಂಗ ಒಪ್ಪಿಕ್ಕು ಘನಗುರುವೆ ಬಸವಣ್ಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ ಲಿಂಗವೆಂದರಿತವರಾರೊ ? ಶಿವ ಶಿವಾ ವಾಯದಲೊದಗಿದ ಮಾಯಾವಾದಿಗಳು ! ದೇವನೆಂದರಿತವರಾರೊ ? ಶಿವ ಶಿವಾ ಅಗ್ನಿ ತೃಣದೊಳಗಡಗಿ ಲೀಯವಾದುದ ಗುಹೇಶ್ವರಾ ನಿಮ್ಮ ಶರಣ ಬಲ್ಲ !
--------------
ಅಲ್ಲಮಪ್ರಭುದೇವರು
ಯೋಗದ ಲಾಗನರಿದು ಯೋಗಿಸಿಹೆನೆಂಬ ಯೋಗಿಗಳು ನೀವು ಕೇಳಿ. ನೆಲವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ ಉರಿವ ಅಗ್ನಿಯ ಕಂಡು, ಆ ಅಗ್ನಿಯ ಮೇಲೆ ಸ್ವರನಾಲ್ಕರ ಕೀಲುಕೂಟದ ಸಂಚಯವ ಕಂಡು, ಆ ಸಂಚಯದಲ್ಲಿ ಆಮೃತಸ್ವರವ ಹಿಡಿದು ಕೂಡುವುದೇ ಪರಮಶಿವಯೋಗ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ.
--------------
ಸ್ವತಂತ್ರ ಸಿದ್ಧಲಿಂಗ
ಯೋಗದಾಗೆಂಬುದ ಮುನ್ನವೆ ಹೊದ್ದದ ಯೋಗಿಯೆ ಶಿವಯೋಗಿ ಮೂಗ ಕಂಡ ಕನಸಿನ ಸ್ನೇಹದಂತೆ, ಮುಗ್ಧೆಯ ಮನಹರುಷದ ರತಿಯಂತೆ, ಸಂಧಾನದಂತೆ; ನಡು ಬಟ್ಟೆಯ ಮೂರು ನಡೆಗಳಲ್ಲಿ ಬರಿಗೆಯ್ದಡೆ ನಡೆಯೊಂದೆ ಸಸಿನ ಕಂಡಾ. ಒಂದ ಮೂರು ಮಾಡಿದಡೆಯೂ ಒಂದೆ ಕಂಡಾ. ಮೂರಾರಾದಡೆಯೂ ಒಂದೆ ಕಂಡಾ. ಆರು ಮುವತ್ತಾರಾದಡೆಯೂ ಒಂದೆ ಕಂಡಾ. ನಿನ್ನ ಅವಯವಂಗಳೆಲ್ಲ ಒಂದೆ ಕಂಡಾ. ನಿನ್ನ ಅರಿವು ಹಲವಾದಡೆ ಅರಿವು ನಿನಗೊಂದೆ ಕಂಡಾ. ಕತ್ತಲೆಯ ಮನೆ, ಮಾಯೆಯೆ ಕಾಡುವ ನಿದ್ರೆ. ಜಾಗರವಾಗಿ ಕಂಗೆಡಿಸಲು, ಕಂಗಳ ಹರವರಿಯಲು, ಮನವ ಮಣ್ಣಿಸು ಕಂಡಾ. ಗುಹೇಶ್ವರ ತಾನಾದ ಮುಗ್ಧತನಕ್ಕೆ ಕಡೆಮೊದಲುಂಟೆ ?
--------------
ಅಲ್ಲಮಪ್ರಭುದೇವರು
ಯೋಗಿ ಜೋಗಿ ಶ್ರವಣ ಸನ್ಯಾಸಿ ಕಾಳಾಮುಖ ಪಾಶುಪತಿಯೆಂಬ ಷಡ್ದರುಶನಕ್ಕೆ ಶಿವಾಚಾರವೆ ಮಿಗಿಲು ನೋಡಾ. ಶಿವಾಚಾರವಿಡಿದು ಪರಬ್ರಹ್ಮಲಿಂಗವನಾಚರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಯೋಗಿ, ಜೋಗಿ, ತಪಸಿ, ಸನ್ಯಾಸಿ, ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ. ತೋರಿ, ಮಾರಿಯುಂಬು ಬೆವಹಾರಗಳು! ನಿರ್ಣಯ ನಿರ್ಲೇಪಭಕ್ತಿ ಯುಳ್ಳವರನಲ್ಲದೊಲ್ಲ, ಸಕಳೇಶ್ವರದೇವ.
--------------
ಸಕಳೇಶ ಮಾದರಸ

ಇನ್ನಷ್ಟು ...
-->