ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದುತ್ಪತ್ತಿಯಯ್ಯ. ಅಗ್ನಿ ವಾಯುವ ಬೆರಸಲು ತ್ವಗೀಂದ್ರಿಯದುತ್ಪತ್ತಿಯಯ್ಯ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದುತ್ಪತ್ತಿಯಯ್ಯ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದುತ್ಪತ್ತಿಯಯ್ಯ. ಅಗ್ನಿ ಪೃಥ್ವಿಯ ಬೆರಸಲು ಘ್ರಾಣೇಂದ್ರಿಯದುತ್ಪತ್ತಿಯಯ್ಯ. ಇಂತಿವು ಬುದ್ಧೀಂದ್ರಿಯಂಗಳುತ್ಪತ್ತಿ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.