ಯೋನಿಯಲ್ಲಿ ಹುಟ್ಟಿ, ಯೋನಿಯನೆ ಬಯಸಿ,
ಯೋನಿಯ ಮುಖಕೆ ಗುರಿಯಾಗಿ ಸತ್ತು ಸತ್ತು
ಯೋನಿಯೆಂಬ ಗಾಣದಲ್ಲಿ ಹುಟ್ಟುತ್ತಿಪ್ಪುದು
`ಶಿವ' ನಿಮ್ಮ ನೆನವ ಮರೆದ ಕಾರಣ.
ಅದು ಎಂತೆಂದರೆ :
ಸಾಕ್ಷಿ : ``ಇದಂ ಗರ್ಭಗತಂ ಶ್ರುತ್ವಾ ಯೋನಿಯಂತ್ರಪ್ರಪೀಡನಂ |
ಜಾಯತೇ ವಾಯುನಾ ವೇತ್ತಿ ವಿಸ್ಮೃತೇ ವೈಷ್ಣವೇ ಶ್ರುತೇ ||''
ಎಂದುದಾಗಿ, ಸಂಸಾರ ವಿಷಯದ ಸರ್ಪನ ವಿಷ ತಲೆಗೇರಿ
ಮುಂದುಗಾಣದೆ ಅರುಹಿರಿಯರೆಲ್ಲ ಭಂಗಬಡುತ್ತಿದ್ದರು-
ನಿನ್ನನೆಂತು ಬಲ್ಲರಯ್ಯ ?
ಸಂಸಾರವೆಂಬುದ ಮುಂದುಗೊಂಡು ನಿನ್ನ ಮರೆದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.