ರ ಪದದಿಂದ ಪ್ರಾರಂಭವಾಗುವ ವಚನಗಳು:
ರಾಜಂಗೆ ಮಂತ್ರಿ ಮುಖ್ಯವಾದಂತೆಬಾಹ್ಯಪ್ರಾಣಕ್ಕೆ ಮನವೆ ಮುಖ್ಯ ನೋಡಾ.ಮನ ಮುಖ್ಯವಾಗಿ ಸರ್ವಪಾಪ ಅನ್ಯಾಯವ ಗಳಿಸಿ,ಕಾಲಂಗೆ ಗುರಿಮಾಡಿ, ಜನನ ಮರಣಕ್ಕೆ ತರಿಸಿ,ಮುನ್ನ ಕಾಡುತ್ತಿದೆ.ಮನವ ನಿರಸನವ ಮಾಡುವರೆನ್ನಳವೆ ?ನಿನ್ನಳವ ಎನ್ನೊಳಿತ್ತು ಮನ್ನಿಸಿ ಕಾಯಯ್ಯಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
ರಕ್ಷಿಗೆ ಒತ್ತೆಯ ಕೊಟ್ಟ ಶಿಶುವಿನಂತೆ,ಕಟುಕಗೆ ಮಾರಿದ ಕುರಿಯಂತೆ,ಕಮ್ಮಾರಗೆ ಮಾರಿದ ಕಬ್ಬಿಣದಂತೆ,ಅಕ್ಕಸಾಲಿಗೆ ಮಾರಿದ ಸೀಸದಂತೆ,ಮಾಯಾಭ್ರಮೆಗೆನ್ನ ಮಾರಿ, ಕರಗಿಸಿ ಕೊರಗಿಸಿಕೋಯಿಸಿ ತಿನಿಸಿ ಸುಟ್ಟು ಸೂರೆಮಾಡಿ ಎನ್ನ ಕಾಡುತ್ತಿದ್ದೆಯಲ್ಲ !ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.