ಜ್ಯೋತಿಯಿಲ್ಲದ ಕತ್ತಲೆಮನೆಯಂತೆ,
ಸೂರ್ಯನಿಲ್ಲದ ಗಗನದ ಕಾಳದಂತೆ,
ಆತ್ಮ ದೇಹ ಮಧ್ಯದ ಗೃಹದೊಳು
ಮಾಯಾತಮಂಧವೆಂಬ ಕತ್ತಲೆಯ ಹೆಚ್ಚಿಸಿ,
ಶಿವಜ್ಞಾನವನಡಗಿಸಿ,
ಅಹಂಕಾರ ಮಮಕಾರವೆಂಬ ಅಜ್ಞಾನಕೆನ್ನ ಗುರಿಮಾಡಿ,
ನೀ ತೊಲಗಿ ಹೋದರೆ ನಾ ಬೀದಿಗರುವಾದೆ.
ಗ್ರಾಣಕೊಂಡ ಚಂದ್ರನಂತಾದೆ,
ಪಿತ-ಮಾತೆಯಿಲ್ಲದ ಶಿಶುವಿನಂತಾದೆ,
ಎನ್ನ ಹುಯ್ಯಲಂ ಕೇಳಿ, ರಂಬಿಸಿ ತಲೆದಡಹು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.