ಉಳಿ ಬಾಚಿಂಗೆ ಹರಿಯದ ಕೊರಡು,
ಕೊಡಲಿ ಕುಡುಗೋಲಿಂಗೆ ಹರಿವುದೆ ?
ಪುರಾತರ ವಚನಾಮೃತವೆಂಬ ಉಳಿಯಲ್ಲಿ ಕಡಿದು
ಬಾಚಿಯಲ್ಲಿ ಕೆತ್ತಿದರೆ ನಾಚದೆ ಮನ ?
ವೇದಾಗಮವೆಂಬ ಕೊಡಲಿ ಕುಡುಗೋಲಿಂಗೆ ಹರಿವುದೆ ? ಹರಿಯದು.
ಕೊರಡುಮನ ಜರಡುಮನ ಜಾಳುಮನ ಹಾಳುಮನ
ಕೋಳುಮನ ಕುಪಿತಮನ ಸರ್ವಚಾಂಡಾಲ ಮನದ
ಮೇಳದ ಬಲೆಯೊಳು ಬಿದ್ದು ಭಂಗಬಡುತ್ತಿದ್ದೆನೈ
ನಿರ್ಭಂಗ ನಿರ್ಲೇಪ ನಿಜಗುರು ನಿಶ್ಚಿಂತ ಸ್ವಯಂಭೂ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.