ದ ಪದದಿಂದ ಪ್ರಾರಂಭವಾಗುವ ವಚನಗಳು:
ದೃಷ್ಟಿ ಕಷ್ಟವ ಮುಟ್ಟುವಲ್ಲಿ ಮೂವರ ಸಂಚವಿಲ್ಲಾಗಿಅಟ್ಟಿ ಹರಿದು ಹರಿಯ ಹಿಮ್ಮಡಿಯ ಹಿಡಿದುಕೊಂಡು ಬಿಟ್ಟೆನು.ಕಟ್ಟಿಯಾಳಿದ ರುದ್ರನೆಂಬನ,ಗೌರಿ ಸರಸ್ವತಿ ಲಕ್ಷ್ಮಿಯ ಹೋಗೆಂದೆ,ಬ್ರಹ್ಮನ ಕಳುಹಿದೆ.ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
ದಗ್ಧವಾದ ಮರ ಇದ್ದಿಲಲ್ಲದೆ ಕಾಷ*ಕ್ಕೆ ಹೊದ್ದಿಗೆ ಉಂಟೆ?ಕಿಗ್ಗಯ್ಯ ನೀರು ತಟಾಕಕ್ಕೆ ಹೊದ್ದಿದುದುಂಟೆ?ಅರಿದು ಮರೆದವಂಗೆ ಸಮಯದ ಹೊದ್ದಿಗೆ ಏನು?ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.