ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೂರ ಬಿಟ್ಟವಂಗಲ್ಲದೆ ಸತ್ಯವ ಸಾದ್ಥಿಸಬಾರದು. ಆರ ಬಿಟ್ಟವಂಗಲ್ಲದೆ ಆದರಿಸಬಾರದು. ಎಂಟ ಬಿಟ್ಟವಂಗಲ್ಲದೆ ಸಾಕಾರದ ಕಂಟಕವನರಿಯಬಾರದು. ರಣದಲ್ಲಿ ಓಡಿ ಮನೆಯಲ್ಲಿ ಬಂಟತನವನಾಡುವನಂತೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಮಜ್ಜನದ ಮಾರಿಯೆ ಪತ್ರೆಯ ತಾಪತ್ರಯ ನಿ[ರ್ಮಾ]ಲ್ಯವ ಲಿಂಗಾರ್ಪಿತ ಮಾಡುವವನೇನೆಂಬೆ. ರೂಪಿಲ್ಲದುದನೊಂದು ಶಾಪ ಬಂಧನಕ್ಕೆ ತಂದು ಕೋಪದ ದೂಪದಾರತಿಯಾದ ತೆರನೆಂತೊ! ಅದು ಬೇಕೆನ್ನದು, ಬೇಡೆನ್ನದು, ಸಾಕೆಂಬುದು ಮುನ್ನಿಲ್ಲವಾಗಿ. ಈ ಪರಿಯ ಭ್ರಮಿತರಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ, ಲಿಂಗ ಕಳೆಯವೆ ಹೃದಯಕ್ಕಾಶ್ರಯವಾಗಿ, ಹೃದಯದ ಕಳೆಯವೆ ಜ್ಞಾನಕ್ಕಾಶ್ರಯವಾಗಿ, ಜ್ಞಾನದ ಕಳೆಯವೆ ನಿತ್ಯಕ್ಕಾಶ್ರಯವಾಗಿ, ನಿತ್ಯನಿರವಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆನು.
--------------
ಘಟ್ಟಿವಾಳಯ್ಯ
ಮನ್ಯ ಓಡಿ ಆಹಾ! ಮನ್ಯ ನಿಂದು ಸರಹೆತ್ತ ಮನಕ್ಕೆ ಸರಾದಿವೊಡೆಯನಾಗಿ ಸರಶಬ್ದದಾ ಮಥನದಾ ಮಥಂತಿ ಮಥನದಾಸರ ಮಥನದಿಂದ ಲಿಂಗ ಉತ್ಪತ್ಯ, ಜಂಗಮ ಉತ್ಪತ್ಯ,ಅನುಭಾವ ಉತ್ಪತ್ಯ. ಸರದಿಂದ ನಿರವಯ, ನಿರವಯದಿಂದ ಸರ. ಸರವಯದಿಂದೆರಡರನ್ವಯದ ಆಧಾರವನು ತನ್ನ ಹೃದಯಕ್ಕೆ ತಂದು ನಿಂದಿತ್ತೆ ನಿರವಯವು. ಇಂತೆಂದಿತ್ತೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಮುಂಡವ ಹೊತ್ತುಕೊಂಡು ಮಂಡಲಕ್ಕೆ ಬಂದಡೆ ಮಂಡಲದ ಹೆಮ್ಮಕ್ಕಳು ಮುಂಡವ ನೋಡುತ್ತಿದ್ದರು, ಇತ್ತ ತಾರು ಮಾಯಿತ್ತು ತೋರು ಮಾಯೆಯೆನುತ್ತ ನೆರೆದು ಮುಂಡವ ಕೊಂಡಾಡುತ್ತಿದ್ದರು. ಇದರ ತಲೆಯೆತ್ತ ಹೋಯಿತ್ತೆಂದಡಲ್ಲಿಯೇ ಅಡಗಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲೆಂದುದಾಗಿ.
--------------
ಘಟ್ಟಿವಾಳಯ್ಯ
ಮಹಾದೇವ ಹತಕ್ಕೆಡೆಯಾಡುವನೆ? ಮಹಾದೇವ ಪರಾಪರ ಪರಿಪೂರ್ಣನಾಗಿ ಮಹಾಸಂಗ ಸುಸಂಗ ನಿಸ್ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ನಿಸ್ಸಂಗ.
--------------
ಘಟ್ಟಿವಾಳಯ್ಯ
ಮುಟ್ಟಿ ಭಕ್ತನು ಮುನ್ನಲ್ಲ, ಬಿಟ್ಟ ಸೂತಕಿ ಬಳಿಕಲ್ಲ. ನೆಟ್ಟನೆ ತಾನಾಗಿ ಆದಿ ಅಂತ್ಯ ಇಲ್ಲಾಗಿ ಶರಣನು ಮುಟ್ಟಿ ಅಗ್ಘವಣಿಯ ಕೊಡನು. ಹುಟ್ಟಿ ಹೊಂದುವ ಹೂವಿನ ಕಷ್ಟದ ಪೂಜೆಯನು ಮಾಡನು. ಮಾಡಿಸಿಕೊಳ್ಳಲಿಲ್ಲವಾಗಿ ಮುಟ್ಟುವ ಮೂರುತಿ ಮತ್ತೆಯೂ ನಷ್ಟವೆಂಬುದನರಿಯರು ಸೃಷ್ಟಿಯಲ್ಲಿ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಉಂಟೆಂಬರು.
--------------
ಘಟ್ಟಿವಾಳಯ್ಯ
ಮೇಲನರಿತಲ್ಲಿ ಕೀಳಿಲ್ಲ, ಕೀಳನರಿತಲ್ಲಿ ಮೇಲಿಲ್ಲ. ಮೇಲು ಕೀಳೆಂಬ ಬೋಳು ಮಾಡಿ ಧೂಳಾಗಬಲ್ಲರೆ ಹೇಳಲಿಲ್ಲ, ಕೇಳಲಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ಮಿಗೆ ಮಿಗೆ ಬಯಲು.
--------------
ಘಟ್ಟಿವಾಳಯ್ಯ
ಮಾಯೆ ಉಂಡವರೆಲ್ಲ ಮಹಂತ ಬೋದರು. ದೇಹ ಉಂಡವರೆಲ್ಲ ದೇವರ ಪೂಜಿಸಿದರು. ಪಂಕ್ತಿ ಉಂಡವರೆಲ್ಲ ಪಥಕ್ಕೊಳಗಾದರು. ಸ್ಥಿರ ಉಂಡವರೆಲ್ಲ ಇರದೆ ಹೋದರು. ಹಾಲುಂಡವರೆಲ್ಲ ಹಂಬಲಿಸುತ್ತೈದಾರೆ. ನಾನು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಮುನ್ನವೆ ಆಚಾರಕ್ಕೆ ಹೊರಗು, ನಾನನಾಚರಿಯಾದ ಕಾರಣ, ನಿಮ್ಮಂತಹವನಲ್ಲ. ಸಮಯಕ್ಕೆ ಹೊರಗು ಜಗದೊಳಗು. ಎನ್ನ ಅರಿಕೆ ಎನಗೆ, ನಿಮ್ಮ ಸಮಯ ನಿಮಗೆ. ಓಗರವನಿಕ್ಕುವಾತನ ಮನೆಯ ಬಾಗಿಲು ಮುಚ್ಚಿಹಿತು ಹೋಗಿರಣ್ಣಾ. ಅನಾಚಾರಿಯ ಮುಖವ ಸದಾಚಾರಿಗಳು ನೋಡಿ ಕೆಡಬೇಡ, ಕೀಳ ತೆಣಕಲಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ