ಸುಳಿದಡೆ ಒಡಲಿಲ್ಲ, ನಿಂದಡೆ ನೆಳಲಿಲ್ಲ,
ನಡೆದಡೆ ಗಮನವಿಲ್ಲ, ನುಡಿದಡೆ ಶಬ್ದವಿಲ್ಲ.
ದಗ್ಧಪಟನ್ಯಾಯದ ಹಾಗೆ, ಉಂಡಡೆ ಉಪಾಧಿಯಿಲ್ಲ
ಉಣ್ಣದಿದ್ದಡೆ ಕಾಂಕ್ಷೆಯಿಲ್ಲ.
ಯಥಾಲಾಭ ಸಂತುಷ್ಟನಾಗಿ
ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ
ಅರಿವಿಲ್ಲ ಮರಹಿಲ್ಲ ತಾನೆಂಬ ನೆನಹಿಲ್ಲವಾಗಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಮುಂದೆ ಏನೂ ಎನಲಿಲ್ಲ, ನಿಲ್ಲು ಮಾಣು.