ಚಿನ್ನಾದ ಬಿದ್ಬಿಂದು ಚಿತ್ಕಳೆ ತಲೆದೋರದಂದು, ಪರನಾದ ಪರಬಿಂದು ಪರಕಲೆ ಇಲ್ಲದಂದು, ಅನಾದಿ ನಾದ ಅನಾದಿ ಬಿಂದು ಅನಾದಿ ಕಲೆ ತಲೆದೋರದಂದು, ಆದಿ ನಾದ ಆದಿ ಬಿಂದು ಆದಿ ಕಲೆ ಇಲ್ಲದಂದು, ನಾದ ಬಿಂದು ಕಲಾತೀತವಿಲ್ಲದಂದು, ನಿರಂಜನ ಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವ ಈ ಆರು ಕಾಮಾಂಗವು ಇಚ್ಛಾಶಕ್ತಿಯೆ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಚಿತ್ತಂ ಬುದ್ಧಿರಹಂಕಾರಂ ಮನೋಜ್ಞಾನಂ ಚ ಭಾವಕಂ | ಷಡ್ಭಿಃ ಕಾಮಾಂಗದಂ ಪ್ರೋಕ್ತಂ ಇಚ್ಛಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.