ಊರ ಮೇಗಡೆಯಲೊಂದು ನರಿ ಕೂಗಿಡಲು
ಹರಡಿದ್ದವರೆಲ್ಲ ನೆರೆದು,
ಇದೆಲ್ಲಿಯ ಕೂಗೆಂದು ವಿಚಾರಿಸಹೋದರೆ,
ನೆರದವರನೆಲ್ಲರ ನರಿ ನುಂಗಲು, ಊರು ಹಾಳಾಯಿತ್ತು.
ಹಾಳೂರೊಳಗಿದ್ದರಸು, ಪರಿವಾರವನರಸಲೆಂದು ಹೋದರೆ,
ಆ ಅರಸನ ನುಂಗಿತ್ತು.
ಆ ಅರಸನ ವಾಹನವ ನುಂಗಿ, ತನಗಾರೂ ಸರಿಯಿಲ್ಲವೆಂದು
ಮೂರು ಮೊನೆಯ ಗಿರಿಯನೇರಿ ಬಟ್ಟಬಯಲಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.