ಜಾಳು ಮಾತೆಂದಡೆ ನಲಿದು ನಲಿದು ನುಡಿವರು.
ಕಾಳುಗೆಲಸವೆಂದಡೆ ನಲಿದು ನಲಿದು ಮಾಡುವರು.
ಶ್ರೀಗುರು ಸೇವೆಯೆಂದಡೆ, ನಿತ್ಯ ಲಿಂಗಾರ್ಚನೆಯೆಂದಡೆ,
ಮತ್ತೆ ಪಂಚಾಕ್ಷರಿಜಪವೆಂದಡೆ, ಅಳಲುವರು, ಬಳಲುವರು.
ಇಂತಪ್ಪ ದುರುಳರಿಗೆ, ದುಃಖವೆ ಪ್ರಾಪ್ತಿಯಲ್ಲದೆ,
ನಿಜಸುಖವೆಂಬುದಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಅವರ ಬಾರದ ಭವದಲ್ಲಿ ಬರಿಸದೆ ಮಾಣ್ಬನೇ?