ಏನೆಂದರಿಯರು, ಎಂತೆಂದರಿಯರು,
ಹಗರಣದ ಹಬ್ಬಕ್ಕೆ ಜಗದ ಜನರೆಲ್ಲ ನೆರೆದು,
ಗೊಂದಣಗೊಳುತ್ತಿದ್ದರಲ್ಲ.
ತ್ರಿಭಂಗಿಯ ತಿಂದು, ಅದು ತಲೆಗೇರಿ
ಗುರುವೆಂದರಿಯರು, ಲಿಂಗವೆಂದರಿಯರು,
ಜಂಗಮವೆಂದರಿಯರು.
ಶಿವ ಶಿವಾ, ಮಾಯಾಜಾಲದಲ್ಲಿ ಸಿಕ್ಕಿದ ಮರುಳು ಜನರು,
ಮುಕ್ಕಣ್ಣನಿಕ್ಕಿದ ಛತ್ರದಲುಂಡು ಸೊಕ್ಕಿ,
ಸಲಹುವ ಕರ್ತನನರಿಯದವರಿಗೆನ್ನೆತ್ತಣ ಮುಕ್ತಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.