ಇನಿಗಡಲ ಅಣುಗನ ಕೂಡಿದ ಪತಂಗನು
ತಾಮಸದಿವಸವ ಮರೆದಂತೆ.
ಸತ್ವಗುಣ ರಜದಲಡಗಿ, ರಜದ ಗುಣ ತಮದಲಡಗಿ,
ತಮದ ಗುಣ ರುದ್ರನೊಳಡಗಿ.
ರುದ್ರನ ಗುಣ ಅಕ್ಷರಾಕ್ಷರ ಪರಶಿವನೊಳಡಗಿ,
ಅಕ್ಷರಾಣಿ ಚ ಮಾತ್ರಾಣಿ ಸರ್ವೇ ಬಿಂದುಸಮಾಶ್ರಿತಾಃ
ಬಿಂದುರ್ಭಿದ್ಯತೇ ನಾದಾತ್ ಸುನಾದಸ್ತೇನಭಿದ್ಯತೇ
ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಬಲ್ಲನಲ್ಲದೆ, ಅಜ್ಞಾನಿಗಳೆತ್ತ ಬಲ್ಲರು ?