ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರುದ್ರದೈವವೆಂದಡೆ ಅರ್ಧನಾರಿಗೆ ಸಿಕ್ಕಿದ. ಚಿದ್ರೂಪ ದೈವವೆಂದಡೆ ಹೊದ್ದಿಹುದಕ್ಕೆ ರೂಪಿಲ್ಲ. ಮತ್ತೆ ಮಹತ್ತಪ್ಪ ಘನವ ನೆನೆದೆಹೆನೆಂದಡೆ, ಮಾತಿಂಗೊಳಗಾಯಿತ್ತು. ಮತ್ತೆ ವಸ್ತುವ ಇನ್ನೇತರಿಂದ ಕಾಬೆ. ಗುರು ನರನಾದ, ಲಿಂಗ ಪಾಷಾಣವಾಯಿತ್ತು, ಜಂಗಮ ಆಶೆಕನಾದ. ಇವೆಲ್ಲವನರಿವ ಮನ ಬೀಜವಾಯಿತ್ತು, ಎನಗಿನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ರಿಣಾತೂರ್ಯ, ಮುಕ್ತ್ಯಾತೂರ್ಯ, ಸ್ವೇಚ್ಫಾತೂರ್ಯ. ಇಂತೀ ಮಾಟವ ಮಾಡುವಲ್ಲಿ, ಉಂಡಲ್ಲಿ ಓಗರ ವಾಂತಿಯಾದಂತೆ, ತಾ ಮಾಡಿದ ಸುಖ ತನಗೆ ದುಃಖವಹ ಭೇದಮಂ ಬಿಟ್ಟು, ಸ್ವೇಚ್ಫಾತೂರ್ಯವೆಂಬ ತುದಿಯಲ್ಲಿ ನಿಂದು, ಆ ತೂರ್ಯವಂ ಬಿಟ್ಟು ತುದಿಯಲ್ಲಿ ನಿಂದು, ಒಡೆಯನು ಕೈಲೆಡೆಯ ಮಡಗಿರಲಾಗಿ ಕೇಳಿದಡೆ, ಒಡೆಯಂಗೆ ಒಡವೆಯಂ ಕೊಟ್ಟು, ದೃಢಚಿತ್ತದಲ್ಲಿರ್ಪವಂಗೆ ಪೊಡವಿಯ ಮಾಟಕೂಟದಾಟದವರು ಸರಿಯೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ರುದ್ರನ ದೇವೆರೆಂದು ಆರಾಧಿಸಿ, ಶಿಲೆಯೊಳಗೆ ಹೋರಟೆಗೊಂಡು, ಕೆಟ್ಟರಲ್ಲಾ ಭಕ್ತಜನಂಗಳು. ವಿಷ್ಣುವ ದೇವರೆಂದು ಆರಾಧಿಸಿ, ಮರನ ಸುತ್ತಿ ಕಾಲುಗೆಟ್ಟರಲ್ಲಾ ಭೂಸುರಾದಿಗಳು. ಬ್ರಹ್ಮನ ದೇವರೆಂದು ಆರಾಧಿಸಿ, ಬೆಂಕಿಯಲ್ಲಿ ಬೆಂದಿರಲ್ಲಾ ಮತ್ರ್ಯಲೋಕದ ಮಹಾಜನಂಗಳು. ಇಂತೀ ಮೂವರು ಗಂಪಧಾರಿಗಳೆಂಬೆ ಧರೆಯೊಳಗೆ. ಹೇರಿನ ಅಕ್ಕಿ, ಲಳಿಗೆಯ ಎಣ್ಣೆ, ಹೂವು ಕಾಯಿ ಹಣ್ಣು ಮೊದಲಾದವನು, ತಪ್ಪ ಸಾಧಿಸಿ ತರಿಸಿಕೊಂಡುಂಬ ಚಿಕ್ಕಮಕ್ಕಳಿಗೆಲ್ಲಿಯದೊ ನೆಟ್ಟನೆಯ ದೇವತ್ವ? ಎನ್ನ ದೇವಂಗೆ ಇಂತಿವರಂಗ ಒಂದೂ ಇಲ್ಲ. ಕಾಲದೊಳಗಾದ ಪ್ರಳಯವಿರಹಿತ, ಕರ್ಮದೊಳಗಾದ ಚತುರ್ವಿಧರಹಿತ, ಗಂಗೆವಾಳುಕಸಮಾರುದ್ರರೊಳಗಾದ ಬಂಧನವಿರಹಿತ. ಲೀಲೆಗೆ ಹೊರಗಾದ ಸ್ವಯಂಭುವಯ್ಯಾ ಎನ್ನ ದೇವ. ಇಂತಿವರೆಲ್ಲರೂ ಪ್ರತಿಷೆ*ಯನಾರಾಧಿಸಿ ಪ್ರಸನ್ನರಾದರಯ್ಯಾ. ಇಂತೀ ಪುಣ್ಯದ ಫಲ ಎನಗೊಂದೂ ಬೇಡ. ಇದ್ದವರೆಲ್ಲ ಒಳಗಿರಲಿ, ನಾ ಹೊರಗಯ್ಯಾ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಅಲಸಿದೆನಲಸಿದೆ, ನಿಮ್ಮ ಕಾಷ*ದ ಸೇವೆಯನಯ್ಯಾ. ಕಾಷ*ದವನ ಕಾಷ*ವ ಮಾಡದೆ, ಎನ್ನ ಹೊರಗಿರಿಸಿ ನಿನ್ನೊಳಗಾದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಣಕ್ಕೆ ಅಲಗೇರಿದಲ್ಲಿ ಹಲುಬಿದಡೆ ಬಿಡುವರೆ ? ಭಕ್ತಿಗೊರೆಗಟ್ಟಿ ತಪ್ಪಿಹೆನೆಂದಡೆ ಬಿಡುವರೆ ? ಸತ್ಯನಾಗಿದ್ದು ಅಸತ್ಯಕ್ಕೆ ಒಡಲಪ್ಪನೆ ? ವಿರಕ್ತನಾಗಿದ್ದು ತಥ್ಯಮಿಥ್ಯಕ್ಕೆ ಹೋರುವನೆ ? ಇಂತೀ ಗುಣವ ತಾನರಿದು ತಿಳಿದು, ತನ್ನಲ್ಲಿ ಬಂದ ಗುಣದೋಷವ ಅನ್ಯರು ನುಡಿದರೆಂದು ಭಿನ್ನವ ಮಾಡಿ ನೋಡುವನ್ನಕ್ಕ, ಭಕ್ತಂಗೆ ಸತ್ಯವಿಲ್ಲ, ವಿರಕ್ತಂಗೆ ಜ್ಞಾನವಿಲ್ಲ. ನಾನು ಇವನಾಡಿ ನೊಂದಹರೆಂಬ ಭಾವ ಎನಗಿಲ್ಲ. ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು, ಆವ ಬಗೆಯಿಂದ ಹೋದಡೆ ಲೇಸು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಸರುಚಿಸುವಲ್ಲಿ, ಗಂಧ ವಾಸಿಸುವಲ್ಲಿ, ರೂಪು ನೋಡುವಲ್ಲಿ, ಶಬ್ದ ಕೇಳುವಲ್ಲಿ, ಸ್ಪರ್ಶ ಮುಟ್ಟುವಲ್ಲಿ. ಇಂತೀ ಐದರ ಮುಖದಲ್ಲಿ, ಅರ್ಪಿಸಿಕೊಂಬವನಾರೆಂಬುದನರಿತು, ಬಂಗಾರದ ಹಲವು ತೆರದ ಆಭರಣವ ಸ್ವಸ್ಥಾನಂಗಳಲ್ಲಿ ಶೃಂಗರಿಸುವುದು, ಘಟದಂದಚೆಂದವಲ್ಲದೆ ಆತ್ಮಂಗೊಂದೆ ವಿಲಾಸಿತ. ತನ್ನಭೀಷ್ಟೆಯ ತಾನರಿದು, ಲೀಲೋಲ್ಲಾಸತೆಯನೆಯ್ದುವಂತೆ, ಲೌಕಿಕಕ್ಕೆ ಕ್ರೀಭರಿತನಾಗಿ, ಭಾವಕ್ಕೆ ಸತ್ಕ್ರೀವಂತನಾಗಿ, ಜ್ಞಾನಕ್ಕೆ ಸರ್ವಸಂತುಷ್ಟನಾಗಿ, ರಾಗವಿರಾಗಿಯಾಗಿ, ನಿಜದಲ್ಲಿ ನಿಂದಾತನೆ ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರೂಪಗೊಂಡ ಲಿಂಗವ ನಿರೂಪಿನಿಂದರಿವಾಗ, ಅದೇತರ ಕಳಾಸ್ವರೂಪು ? ನಿಷೆ*ಯ ಭಾವವೋ ? ಇಷ್ಟದ ದೃಷ್ಟವೋ ? ಉಭಯವನರಿವ ಚಿತ್ತುವಿನ ಭೇದವೋ ? ಇಷ್ಟನರಿತಲ್ಲಿ ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಾಜರಲ್ಲಿ ಹೊಕ್ಕ ಮತ್ತೆ, ಅವರ ಆಗುಚೇಗೆಯ ಹೇಳಬೇಕು. ಬೇಗೆಯ ಅಳರಿನಲ್ಲಿ ಹೊಕ್ಕ ಮತ್ತೆ, ಸೂಡಿಗೆ ಅಂಜಲೇಕೆ ? ಸುಖವ ಮೆಚ್ಚಿ ಅಖಿಳರೊಡನೆ ಬೆರಸಿದ ಮತ್ತೆ, ಅಕಳಂಕತನವುಂಟೆ ? ಇಂತೀ ಬಕಧ್ಯಾನಿಗಳ ಧ್ಯಾನ, ಮಕರದ ಒಲುಮೆಯಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ, ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ. ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ. ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ, ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ. ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ. ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ. ಸ್ವಯಂಜ್ಯೋತಿಯ ಬೆಳಗುಳ್ಳವಂಗೆ, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ. ವಾಯುಗಮನವುಳ್ಳವಂಗೆ ತೇಜಿಯನರಸುವಂತೆ. ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ. ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ. ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ಮುಕ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ, ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು, ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಸ ಆತ್ಮನಂಗ, ಗಂಧ ವಾಯುವಿನಂಗ, ರೂಪು ಭಾವದಂಗ, ಶಬ್ದ ಆಕಾಶದಂಗ, ಸ್ಪರ್ಶ ಫೃಥ್ವಿಯಂಗವಾಗಿ ಅಂಗೀಕರಿಸುವಲ್ಲಿ, ಪಂಚೇಂದ್ರಿಯಮುಖಂಗಳಿಂದ ಅರ್ಪಿಸಿಕೊಂಬವನಾರು ಹೇಳಾ. ಅದು ಸ್ಥಾಣು ಚೋರನಂತೆ, ರಜ್ಜು ಸರ್ಪನಂತೆ, ತಿಳಿದು ನೋಡಲಿಕೆ ಮತ್ತಲ್ಲಿ ಏನೂ ಇಲ್ಲ. ತನ್ನರಿದು ಮುಟ್ಟುವಲ್ಲಿ ತಾನು ತಾನೆ. ತನ್ನನರಿಯದೆ ಮುಟ್ಟುವಲ್ಲಿ, ಇಂದ್ರಿಯಂಗಳು ಅನ್ಯಭಿನ್ನವಾಗಿಹವು. ಅನ್ಯವಿಲ್ಲದೆ ಚೆನ್ನಾಗಿ ತಿಳಿದು ನೋಡಲಾಗಿ, ಅಭಿನ್ನಮೂರ್ತಿ ನಿಃಕಳಂಕ ಮಲ್ಲಿಕಾರ್ಜುನ, ತಾನು ತಾನೆ.
--------------
ಮೋಳಿಗೆ ಮಾರಯ್ಯ
ರುದ್ರತತ್ವ ಲಿಂಗಮೂರ್ತಿಯಾಗಿ, ಈಶ್ವರತತ್ವ ಶರಣಮೂರ್ತಿಯಾಗಿ, ಸದಾಶಿವತತ್ವ ಐಕ್ಯಕೂಟಸ್ಥವಾಗಿ, ನಾಮರೂಪ ಭಾವವಳಿದಲ್ಲಿ, ಪರಶಿವಮೂರ್ತಿ ಪರಾಪರದೊಳಗಾಯಿತ್ತು. ಅದು ಅವರೋಹಾರೋಹವಾದಲ್ಲಿ, ಬಸವಣ್ಣ ಚೆನ್ನಬಸವಣ್ಣನೆಂದು ಒಂದು ಮೂರಾಗಿ, ಮೂರು ಆರಾಗಿ, ಆರು ಮಿಶ್ರವಾಗಿ, ನೂರೊಂದರಲ್ಲಿ ತೋರಿಹ ಸ್ಥಲ ಕುಳಂಗಳೆಲ್ಲ ಸುವರ್ಣದ ಸಾರದಂತೆ ಉರಿಗೆ ಕರಗಿ, ಉರಿಯಡಗೆ ಮುನ್ನಿನಂತಿರವು. ಆ ತೆರವಾದ ಸ್ಥಲಕುಳ ವಿವರ, ಸ್ಫಟಿಕದ ಬಹುವರ್ಣದಂತೆ. ವರ್ಣವಳಿಯೆ ಘಟವುಳಿದ ಮತ್ತೆ, ಮುನ್ನಿನಂದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರೂಪಿನಲ್ಲಿ ಪೂಜಿಸಿಕೊಂಬ ಲಿಂಗ, ಶಿಲೆಯ ಹಂಗು ಬಿಡದಾಗಿ, ಮುಟ್ಟಿ ಪೂಜಿಸುವ ಭಕ್ತಂಗೆ ಭವ ಬಿಡದು. ಭಾವದಿಂದರಿದು ಭಾವಿಸಿಹೆನೆಂದಡೆ, ಆ ಭಾವ ಕುರುಹಿಲ್ಲದೆ ಅರಿಯಬಾರದು. ಅರಿವು ಕುರುಹ ನುಂಗಿ, ಕುರುಹು ಅರಿವಿನಲ್ಲಿ ಲೇಪವಾಗಬೇಕು. ಲೇಪವಾದ ಮತ್ತೆ ಕುರುಹಿಗೆಯೂ ಅರಿವಿಗೂ ತೆರದರ್ಶನವಿಲ್ಲವಾಗಿ, ಸೊಪ್ಪನೊಳಕೊಂಡ ಬಿತ್ತಿನಂತೆ, ಕರ್ಪುರವನೊಳಕೊಂಡ ಕಿಚ್ಚಿನಂತೆ, ಚಿತ್ರವನೊಳಕೊಂಡ ಭಿತ್ತಿಯಂತೆ, ಮುತ್ತನೊಳಕೊಂಡ ನಿಜಕಾಂತಿಯಂತೆ, ಸದ್ಭಕ್ತಿಯನೊಳಕೊಂಡ ಘನಲಿಂಗದಂತೆ. ಹೀಂಗಲ್ಲದೆ ಪ್ರಾಣಲಿಂಗವಾಗಬಾರದು, ಲಿಂಗಪ್ರಾಣವಾಗಬಾರದು. ಈ ದ್ವಂದ್ವವನಳಿದ ಸಂಬಂಧಿಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ