ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾದ್ಥಿಸಿ ಕೈಗೊಟ್ಟ ಪರಿಯ ನೋಡಾ !ಹಾದಿ ಬಟ್ಟೆಯ ಸಾಧಕರತ್ತ ಸವೆಯದೆಮೂದೇವರ ಮಾಟದೊಳಗಿರ್ದುಕೂಟಕೈದಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆನೋಡ ಬಂದವರನುವನವರೆತ್ತ ಬಲ್ಲರಯ್ಯಾ?ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿಗುರುನಿರಂಜನ ಚನ್ನ ಬಸವಲಿಂಗಾ.
ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು.ಗುರುಲಿಂಗದೊಳಗಿಪ್ಪೆವೆಂಬರು ಅಪ್ಪುವಿನ ಕತ್ತಲೆಯೊಳಡಗಿಹರು.ಶಿವಲಿಂಗದೊಳಗಿಪ್ಪೆವೆಂಬರು ಅಗ್ನಿಯ ಕತ್ತಲೆಯೊಳಡಗಿಹರು.ಜಂಗಮಲಿಂಗದೊಳಗಿಪ್ಪೆವೆಂಬರು ವಾಯುವಿನ ಕತ್ತಲೆಯೊಳಡಗಿಹರು.ಪ್ರಸಾದಲಿಂಗದೊಳಗಿಪ್ಪೆವೆಂಬರು ಆಕಾಶದ ಕತ್ತಲೆಯೊಳಡಗಿಹರು.ಮಹಾಲಿಂಗದೊಳಗಿಪ್ಪೆವೆಂಬರು ಆತ್ಮನ ಕತ್ತಲೆಯೊಳಡಗಿಹರು.ಇವರನೆಂತು ಶರಣೈಕ್ಯರೆನ್ನಬಹುದು ಹುಸಿಡಂಭಕ ಹೇಸಿಮಾನವರ ?ಗುರುನಿರಂಜನ ಚನ್ನಬಸವಲಿಂಗಾ
ಆಹಾ ಎನ್ನಪುಣ್ಯದ ಫಲ !ನಿರಾಕಾರ ಗುರುವೆನಗೆ ಸಾಕಾರವಾಗಿ ಬಂದುದು.ಆಹಾ ಎನ್ನ ಬಹುಜನ್ಮದ ತಪಸ್ಸಿನ ಫಲ !ನಿರವಯಾನಂದ ನಿಜವೆನಗೆ ಸಾಧ್ಯವಾದುದು.ಆಹಾ ಎನ್ನ ಭಾಗ್ಯದ ನಿದ್ಥಿಯೆನಗಿತ್ತನಿರಂಜನ ಚನ್ನಬಸವಲಿಂಗವೆಂಬ ಸದ್ಗುರುದೇವನು.
ಆಣವಮಲವ ಕರುಣಜಲದಿಂದೆ ತೊಳೆದುಸದ್ಗುರುಲಿಂಗವೆನ್ನ ಅಂಗದಲ್ಲಿರಲು,ಸಕಲಕ್ರಿಯಂಗಳೆಲ್ಲ ಸತ್ಕ್ರೀಯಾಸ್ವರೂಪವಾಗಿ ಕಾಣಿಸುತಿರ್ದವು.ಮಾಯಾಮಲವ ವಿನಯಜಲದಿಂದೆ ತೊಳೆದುಚಿದ್ಗುರುಲಿಂಗವೆನ್ನ ಪ್ರಾಣದಲ್ಲಿರಲು,ಸಕಲಜ್ಞಾನಂಗಳೆಲ್ಲ ಸುಜ್ಞಾನಸ್ವರೂಪವಾಗಿ ಕಾಣಿಸುತಿರ್ದವು.ಕಾರ್ಮಿಕಮಲವ ಸಮತಾಜಲದಿಂದೆ ತೊಳೆದುಆನಂದಗುರುಲಿಂಗವೆನ್ನ ಭಾವದಲ್ಲಿರಲು,ಸಕಲಭಾವಂಗಳೆಲ್ಲ ಮಹಾನುಭಾವವಾಗಿ ಕಾಣಿಸುತಿರ್ದವು.ಇಂತು ಸತ್ಕ್ರಿಯಾ ಸಮ್ಯಕ್ಜ್ಞಾನ ಮಹಾನುಭಾವ ಸನ್ನಿಹಿತನಾಗಿಒಳಹೊರಗೆ ಪರಿಪೂರ್ಣ ಪ್ರಕಾಶಮಯವಾಗಿರ್ದೆನು ಕಾಣಾಗುರುನಿರಂಜನ ಚನ್ನಬಸವಲಿಂಗಾ.
ಆಚಾರವನರಿಯದ ನಡೆ ದುರ್ನಡೆ.ಆಚಾರವನರಿಯದ ನೋಟ ಭವದಕೂಟ.ಆಚಾರವನರಿಯದ ಅಂಗ ವಿಚಾರಭಂಗ.ಆಚಾರವನರಿಯದ ಅನುಭಾವ ಅಪ್ರಮಾಣ ದುರ್ಭಾವ.ಇದು ಕಾರಣ ಗಣಕೂಟಕೆ ಆಚಾರವೇಬೇಕು ಕಾಣಾಚನ್ನ ಕಾಯಮನಭಾವಪ್ರಿಯ ಮಹಾಲಿಂಗದಲ್ಲಿ.
ಆಚಾರಶೂನ್ಯ ಅಂಗ ಗುರುದ್ರೋಹಿ ಮಾಡಲಾಗದು ಭಕ್ತಿಯ.ಆಚಾರಶೂನ್ಯ ಮನ ಲಿಂಗದ್ರೋಹಿ ಮಾಡಲಾಗದು ಪೂಜೆಯ.ಆಚಾರಶೂನ್ಯ ಭಾವ ಜಂಗಮದ್ರೋಹಿ ಮಾಡಲಾಗದು ದಾಸೋಹವ.ಆಚಾರತ್ರಯವಿರಹಿತವಾದ ಅನಾಚಾರ ಭ್ರಷ್ಟರುಗಳಶ್ರೇಷ್ಠರೆಂದು ಪೂಜೆಯ ಮಾಡಿದರೆ ಭವತಪ್ಪದು ಕಾಣಾಗುರುನಿರಂಜನ ಚನ್ನಬಸವಲಿಂಗಾ.
ಆದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,ವೇದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,ಸಾಧ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,ನೂತನ ಪುರಾತನರು ಕೂಡಿ ಸೋತು ಮಾಡಿದನುಭಾವದಲ್ಲಿಪರಮಸುಖಿಯಾಗಿರ್ದೆನು ಗುರುನಿರಂಜನ ಚನ್ನಬಸವಲಿಂಗಾ.
ಆಳಿದೊಡೆಯರು ಮೇಳೈಸಿ ಕೆಳಗೆ ಬಂದಲ್ಲಿನಾಳೆಂದರೆ ಹಾಳಾಗಿ ಹೋಯಿತ್ತೆನ್ನ ಪತಿಭಾವದ ಬಾಳುವೆ.ಅಳಿಯಾಸೆಯೆಂಬ ಸುಳುಹೆನ್ನ ಕೆಡಿಸಿತ್ತು,ಎನಗೆಂತು ಭಕ್ತಿಸಂಭವಿಸುವದು !ಎನಗೆಂತು ಯುಕ್ತಿ ಸಂಭವಿಸುವದು !ತಪ್ಪೆನ್ನದು ತಪ್ಪೆನ್ನದು ಬಟ್ಟೆಗೆಟ್ಟು ಬಿದ್ದೆ ನಿಮ್ಮೊಳಗೆಗುರುನಿರಂಜನ ಚನ್ನಬಸವಲಿಂಗಾ.
ಆಚಾರವಿಲ್ಲದಂಗ, ವಿಚಾರವಿಲ್ಲದ ಮನ,ಸಂಬಂಧವರಿಯದ ಪ್ರಾಣ, ಪರಿಣಾಮವರಿಯದ ಭಾವ,ಈ ಚತುರ್ವಿಧದಲ್ಲಿರ್ದ ಚಾಪಲ್ಯರು ಸಲ್ಲರಯ್ಯಾಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಸ್ಥಲಕ್ಕೆ.
ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು,ಆರೈದು ಅಂಗಪ್ರಾಣಾತ್ಮ ಸಂಗಸಮರಸಾನಂದ ಶರಣಂಗೆಒಂದೂ ಆಶ್ಚರ್ಯ ತೋರದು,ಅದೇನು ಕಾರಣವೆಂದೊಡೆ,ತಾನೆ ಹರಿ ವಿದ್ಥಿ ಸುರಾದಿ ಮನುಮುನಿಸಕಲಕ್ಕೂ ಆಶ್ಚರ್ಯವಾದ ಕಾರಣ.ಅಂತಪ್ಪ ಶರಣನೇ ಶಿವನಲ್ಲದೆ ಬೇರಿಲ್ಲ ಕಾಣಾ.ಅದಲ್ಲದೆ ಮತ್ತೆ ಗಿರಿಗೋಪುರ ಗಂವರ ಶರದ್ಥಿತಾಣ ಸ್ಥಾವರಕ್ಷೇತ್ರನರಕುಶಲ ಕುಟಿಲ ಭೂತಾದಿ ಕಿಂಚಿತಕ್ಕಾಶ್ಚರ್ಯವೆಂಬಬಾಲಮರುಳ ಅಜ್ಞಾನಿಗಳಿಗೆ ಲಿಂಗಶರಣರೆಂಬ ನಾಮ ಬಹು ಭಾರ ಕಾಣಾಗುರುನಿರಂಜನ ಚನ್ನಬಸವಲಿಂಗಕ್ಕೆ.
ಆಡಬಂದ ಮೂರ್ತಿಗೆ ಕೂಡಿ ಮಾಡಬಲ್ಲವರಾರಯ್ಯಾ ?ಮಾತು ನೀತಿಯ ಕೇಳಿ, ಜಾತಿ ಮೂಲ ಜಂಜಡವೊಂದೆ ಮಾಡಿಲಾಭವನುಂಬ ಹಾದಿಯ ಹಿರಿಯರಂತಿರಲಿನೀಡಿಯಾಡದೆ ಕೊಟ್ಟು ಕಾಣುವ ದಿಟ್ಟಗಲ್ಲದೆಬಟ್ಟೆಗಳ್ಳರಿಗೆಂತೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗ ?
ಆಸೆಯುಳ್ಳರೆ ಭಕ್ತನೆಂಬೆ,ರೋಷವುಳ್ಳರೆ ಮಹೇಶ್ವರನೆಂಬೆ,ಆಲಸ್ಯವುಳ್ಳರೆ ಪ್ರಸಾದಿಯೆಂಬೆ,ಹಿಂಸೆಯುಳ್ಳರೆ ಪ್ರಾಣಲಿಂಗಿಯೆಂಬೆ,ಸಂಸಾರವುಳ್ಳರೆ ಶರಣನೆಂಬೆ,ಸಂಗವುಳ್ಳರೆ ಐಕ್ಯನೆಂಬೆ.ಇಂತಿವು ಶೂನ್ಯವಾದರೆ ಆರೂಢನೆಂಬೆಗುರುನಿರಂಜನ ಚನ್ನಬಸವಲಿಂಗದಸಂಗಕ್ಕೆ ಬೇಕಾದ ಕಾರಣ ಬೇಕೆಂಬ ಶರಣಂಗೆ.
ಆದಿಮುಖದಿಂದೆ ಅಂಗ ಮನ ಪ್ರಾಣಂಗಳಲ್ಲಿಅನುಭಾವಿಯಾಗಿ ಅರಿದುಂಬ ಘನವನರಿಯದೆ,ಆ ಮಹಾಘನಪ್ರಕಾಶವ ಭಿನ್ನವಿಟ್ಟು ಕಂಡು ಕೂಡಿ ಸುಖಿಸೆನೆಂಬಅಪಶಬ್ದ ನುಡಿಯ ಅಜ್ಞಾನಿಗಳಿಗತ್ತತ್ತಲಾದಗುರುನಿರಂಜನ ಚನ್ನಬಸವಲಿಂಗ.
ಆಡಿ ದಣಿವರಿಯವಯ್ಯಾ ಎನ್ನ ಕಾಲುಗಳು,ಮಾಡಿ ದಣಿವರಿಯವಯ್ಯಾ ಎನ್ನ ಕೈಗಳು,ನೋಡಿ ದಣಿವರಿಯವಯ್ಯಾ ಎನ್ನ ಕಂಗಳು,ಹಾಡಿ ದಣಿವರಿಯದಯ್ಯಾ ಎನ್ನ ಜಿಹ್ವೆಯು.ಕೇಳಿ ದಣಿವರಿಯವಯ್ಯಾ ಎನ್ನ ಶ್ರೋತೃ,ಬೇಡಿ ದಣಿವರಿಯವಯ್ಯಾ ಗುರುನಿರಂಜನ ಚನ್ನಬಸವಲಿಂಗನಿಮ್ಮ ಶರಣರೊಲವೆ ಎನ್ನಭಾವ.
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳುಸಹಜವನೆತ್ತ ಬಲ್ಲರಯ್ಯಾ ?ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾಲಿಂಗದ ನಿಜವ ?ಅರ್ಥವ ಹಿಡಿದು, ಅರಿವ ಮರೆದು, ಕರ್ತುಗಳಾಪ್ಯಾಯನವರಿಯದಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾಗುರುನಿರಂಜನ ಚನ್ನಬಸವಲಿಂಗ ಶರಣರ ಘನವ.
ಆಕಾಶದ ಬಣ್ಣವನೋಕರಿಸಿ ತೋರಲುತಾಕಲಾರದು ತಾರೇಂದು ರವಿ ಮೇಘ ಗಡಣವನುಳಿದು.ತನುಮನಪ್ರಾಣಭಾವಶೂನ್ಯ ಗುರುನಿರಂಜನ ಚನ್ನಬಸವಲಿಂಗ.
ಆಕಾಶದಲ್ಲಿರ್ದ ತಾವರೆಯೊಳಗಿನ ಮುತ್ತಿನ ನೀಲದ ಮುಮ್ಮೊನೆಯೊಳುಥಳಥಳನೆ ಹೊಳೆವ ಪರಮ ಪುರುಷನ ನೆರೆದು ಸುಖಿಸಬಲ್ಲ ಮಹಿಮನೆಪ್ರಾಣಲಿಂಗಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
ಆದಿ ಮಧ್ಯ ಅವಸಾನವನರಿದು ಅಪ್ರತಿಮಲಿಂಗಸನ್ನಿಹಿತನಾದ ಶರಣಒಳಗೆಂಬ ಕಳವಳವನರಿಯ.ಪಂಚಾಚಾರಸ್ವರೂಪ ಕಂಗಳು ಹಿಂಗದಿರ್ದುದಾಗಿಹೊರಗೆಂಬ ಸಟೆಭಾವ ದಿಟವಿಲ್ಲ.ಪ್ರಾಣಲಿಂಗವೇದಿ ಪರಿಪೂರ್ಣ ತಾನಾಗಿಕಂಡರ್ಪಿಸಿಕೊಂಡು ಸುಖಿಸಬೇಕೆಂಬ ಸಂಕಲ್ಪ ಸಂವಿತ್ತನಲ್ಲ.ಗುರುನಿರಂಜನ ಚನ್ನಬಸವಲಿಂಗವೆಂಬ ಅಖಂಡಪ್ರಸಾದಕ್ಕೆಅಂಗವಾಗಿರ್ದ ಅನುಪಮಪ್ರಸಾದಿ ಶರಣ.
ಆತ್ಮನೇ ಲಿಂಗವೆಂದು ಕಂಡುಂಬ ಬಹಿರ್ಗತ್ತಲೆನುಡಿಯ ಭಾವಿಸರು.ಅದೇಕೆಂದೊಡೆ, ಅಂಗದಲ್ಲಿ ಇಷ್ಟಲಿಂಗ ಪ್ರಕಾಶಿಸುತ್ತಿಹುದಾಗಿ.ಇಟ್ಟು ಮಾಡಿ ಕೆಟ್ಟುಂಬ ಅಂತರಗತ್ತಲೆಂದು ನಡೆಯ ಭಾವಿಸರು.ಅದೇಕೆಂದೊಡೆ, ಮನ ಪ್ರಾಣಲಿಂಗದಲ್ಲಿ ತರಹರವಾದುದಾಗಿ.ಯೋಗಚರಿಯ ಭೋಗಿಗಳ ತೂಗಿ ಭಾವಿಸರು.ಅದೇಕೆಂದೊಡೆ, ಶಿವಯೋಗಭೋಗತೃಪ್ತರಾದ ಕಾರಣ.ಗುರುನಿರಂಜನ ಚನ್ನಬಸವಲಿಂಗಾ,ನಿಮ್ಮ ಪ್ರಸಾದಿಯ ಕಾರ್ಯಕಾರಣ ತಿಳಿಯಬಾರದಾರಿಗೆಯೂ.
ಆದಿಯಿಂದ ಹುಟ್ಟಿ ಅನಾದಿಯ ಹಿಡಿದುನಡೆಯಬಲ್ಲೆವೆಂಬ ಹಿರಿಯರು ಕೇಳಿಭೋ.ತನುತ್ರಯ ಮನತ್ರಯ ಭಾವತ್ರಯ ಸಧರ್ಮದ್ರವ್ಯವ ಬಳಸದೆನವವಿಧಭಕ್ತಿಯಿಂದೆ ಸೇವಿಸಿ ಸುಖಭರಿತನಾಗಲರಿಯದೆ,ದಾಸೋಹಭಕ್ತಿಯ ಮಾಡುವೆನೆಂದು ಹೇಸದೆಅಧರ್ಮ ಅವಿಚಾರಾದಿಗಳ ಬಗೆಬಗೆಯಿಂದೆ ಬಣ್ಣಿಸಿ,ಕಾಸುಕಳಚಿಸಿ ಕೈಯಾಂತುಕೊಂಡು ಧೂಳಮೇಳ ಸಮೇತಭಕ್ತಿಯೆಂದು ಮಾಡುವದು ಶಿವ ನುಡಿದಿಲ್ಲ ಗುರುವಾಕ್ಯವಿಲ್ಲ.ಗುರುಲಿಂಗವರಿಯದ ಸಂತಸುಖಿಗಳ ಭಕ್ತಿ.ಆ ಭಕ್ತಿ ಅಯೋಗ್ಯ ಕಾಣಾ ನಿಮ್ಮ ನಿಲುವಿಗೆಗುರುನಿರಂಜನ ಚನ್ನಬಸವಲಿಂಗಾ.
ಆಕಾರ ನಿರಾಕಾರವಾಗಿ ಸಾಕಾರ ಸನ್ನಿಹಿತನಾದಸದಮಲಶರಣನ ಪರಮಶಾಂತಿಯಮುಂದೆ-ಹಿಂದೆ, ಬಲ-ಎಡ, ಮೇಲೆ-ಕೆಳಗೆ, ಕಿಕ್ಕಿಂದವಾಗಿನಿರಾಕಾರಭಕ್ತಿ ಸಾಕಾರಸದಾನಂದವಾಗಿ, ಉಲಿ ಉಲಿದಾಡುತಿರ್ದಿತ್ತು,ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
ಆಸೆಗೆ ವೇಷವಹೊತ್ತು ಅಷ್ಟಮದವೇ ಅಂಗವಾಗಿ,ಪಂಚಸೂತಕವೆ ಪ್ರಾಣವಾಗಿ, ವಂಚನೆಯೇ ಮುಖವಾಗಿ,ತಾನೊಂದು ಕಾಯನಾಗಿ ಮಾಡುವ ಮಾಟ ಭವದ ಬೇಟ.ಈ ಗತಿ ದುರ್ಗತಿ, ಸ್ಥಲನಾಮ ಸಲ್ಲದು ಕಾಣಾಗುರುನಿರಂಜನ ಚನ್ನಬಸವಲಿಂಗಾ.
ಆಚಾರಲಿಂಗಕ್ಕೆ ಅಂಗವಾದ ಅನುಪಮ ಶರಣನ ಕಂಡರೆಪೂರ್ಣೇಂದುವಿಂಗಿದಿರಗಡಲದಂತಾಯಿತ್ತೆನ್ನ ತನು;ರವಿಬರವಿಂಗರಳಿದ ಪದುಮದಂತಾಯಿತ್ತೆನ್ನ ಹೃದಯ;ಮೇಘದರ್ಶನಸುಖದ ಸಿಖಿಯಂತಾಯಿತ್ತೆನ್ನ ಗಮನಗತಿ;ಚಂಪಕದರಳಿಂಗೆರಗಿದ ಭ್ರಮರದಂತಾಯಿತ್ತೆನ್ನಭಾವ;ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
ಆಡುವರಯ್ಯಾ ಆಚಾರವನಳಿದು,ನೋಡುವರಯ್ಯಾ ಶಿವರತಿಯ ಮರದು,ಮಾಡುವರಯ್ಯಾ ವಂಚನೆಯ ನೆರದುಬೇಡುವರಯ್ಯಾ ಮನದೊಳು ಮರದು,ನೆಟ್ಟನೆ ಕೂಡುವರಯ್ಯಾ ಮಲತ್ರಯಮೋಹದೊಳುಹೇಳುವರಯ್ಯಾ ಲಿಂಗಶರಣರೆಂದು,ಇಂತಪ್ಪ ಕಾಳಕೂಳರಿಗೆ ಸಚ್ಚಿದಾನಂದ ಪರಶಿವಾಂಗ ಶರಣರೆಂತೆನ್ನಬಹುದುಗುರುನಿರಂಜನ ಚನ್ನಬಸವಲಿಂಗಾ?