ಊರು ಕೆಟ್ಟುಹೋಗಿ ಕಲ್ಯಾಣ ಕೌಲು ನಿಂದಲ್ಲಿ,
ಕೂಡಿದ ಸಂಪತ್ತು ಸಲ್ಲಲಿತದೊಳಿರ್ದೆನಯ್ಯಾ.
ಎನ್ನ ಮಠಕ್ಕೆ ಬಂದ ಬಸವಣ್ಣನೊಂದುಕೊಂಡ,
ಮಡಿವಾಳಯ್ಯನೊಂದುಕೊಂಡ,
ಚನ್ನಬಸವಣ್ಣನೊಂದುಕೊಂಡ, ಸಿದ್ಧರಾಮಯ್ಯ ನೊಂದುಕೊಂಡ,
ಉರಿಲಿಂಗಪೆದ್ದಣ್ಣನೊಂದುಕೊಂಡ, ಅಜಗಣ್ಣನೊಂದುಕೊಂಡ
ಇಂತಾದಬಳಿಕ ಮುಂದೆ ಮುಕ್ತಾಯಿ ಇಲ್ಲ,
ಮಹಾದೇವಿಯಕ್ಕನೊಳಗಡಗಿರ್ದೆನು
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.