ಘನಮಹಾಪ್ರಕಾಶಲಿಂಗವೆನ್ನ ಕರಸ್ಥಲದಲ್ಲಿ ಮಿನುಗುತ್ತಿರಲು,
ಎನ್ನ ಕರ್ಮೇಂದ್ರಿಯಗಳೆಲ್ಲ ಕಳೆದುಳಿದವು,
ಎನ್ನ ವಿಷಯಂಗಳೆಲ್ಲ ಸತ್ತುನಿಂದವು,
ಎನ್ನ ಧರ್ಮೇಂದ್ರಿಯವೆಲ್ಲ ಅಳಿದುಳಿದವು,
ಎನ್ನ ಪ್ರಾಣಾದಿ ವಾಯುಗಳೆಲ್ಲ ಮರೆದುನಿಂದವು.
ಎನ್ನ ಕರಣಂಗಳೆಲ್ಲ ಬಿಟ್ಟುನಿಂದವು,
ಕ್ರಿಯಾದಿ ಶಕ್ತಿಗಳೆಲ್ಲ ಪ್ರಕಾಶವಾಗಿನಿಂದವು,
ನಿರಂಜನ ಚನ್ನಬಸವಲಿಂಗದವಸರಕ್ಕೆ.