ಧರೆಯನು ಧೂಳದಲ್ಲಿ ಬೆಳಗಿ, ನೀರನು ಜಲದಲ್ಲಿ ತೊಳೆದು,
ಕಿಚ್ಚನು ಕೆಂಡದಲ್ಲಿ ಸುಟ್ಟು, ಗಾಳಿಯನು ವಾತದಲ್ಲಿ ತಿರುಹಿ,
ಆಕಾಶವನು ಬಯಲಲ್ಲಿ ಬಗೆದು,
ತನ್ನನು ತನ್ನಲ್ಲಿ ನೋಡಿ ಮಾಡಿ ಪೂಜಿಸಿ ಸುಖಿಸಲರಿಯದೆ
ಪಂಚ ಪಂಚವರ್ತನಾಭಾವದ ಕಳೆಯಲ್ಲಿ ಬೆಳೆದು ತೋರಿ ಮಾಡಿ,
ಮಾಟಕೂಟದ ಕೋಟಲೆಯೊಳಗೆ ಭಂಗಿತರಾದರು.
ಅದು ಕಾರಣ ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು
ಅಲ್ಲಿಯೇ ಹಿಂಗಿರ್ದನು ನಿರ್ಮಲಹೃದ್ಬೆಳಗಿನಲ್ಲಿ.