ಫಲ ವೃಕ್ಷ ತರು ಲತೆಗಳೆಲ್ಲ ತಮ್ಮ ಸಲಹಿದವರಾದಿ ಸಕಲರುಗಳಿಗೆ
ವಂಚನೆಯಿಲ್ಲದೀಯುವಂತೆ ನಿಜತನಿರಸವನು,
ಸಮ್ಯಕ್ಜ್ಞಾನಗುರುವಿನಿಂದೆ ಜನಿಸಿ ಬೆಳೆದ ಪರಮಸಾವಧಾನಿ ಶರಣನು
ತನ್ನ ಸತ್ತುಚಿತ್ತಾನಂದಸ್ವರೂಪವಾದ ಗುರುಲಿಂಗಜಂಗಮಕ್ಕೆ
ತನುಮನಧನದ ಚಿದ್ರಸಸ್ವಾದವನು ವಂಚನೆವಿರಹಿತನಾಗಿತ್ತು
ಪರಿಣಾಮಿಸಿಕೊಂಡು ಲೀಲಾಲೋಲನಾಗಿರ್ದ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.