ಏನೆಂಬೆನೆಂತೆಂಬೆನೆನ್ನ ಮನಕ್ಕೆ ನಾಚಿಕೆ ಬಾರದೇಕೆ ?
ಆಗಮನುಡಿಯ ಕೇಳುವುದು,
ಇತರ ಸಾಗಿಸಿ ಹೇಳುವುದು, ಶಿವಾನುಭಾವವ ಕೇಳುವುದು,
ಅದರಂತೆ ಬೋಧೆಯ ಹೇಳುವುದು.
ನಿತ್ಯಾನಿತ್ಯವನಿದಿರಿಟ್ಟು
ಸತ್ಯವೇ ಮೋಕ್ಷ, ಅಸತ್ಯವೇ ನರಕವೆಂಬುದು.
ಶ್ರುತಿಗುರುಸ್ವಾನುಭಾವವನುಳಿದು, ಗಿಳಿಪಶುಭಾವ ಬರಲುಂಟೆ ?
ನಾಚಿಕೆ ತಾನೇಕೆ ಬಾರದು ?
ಇಂತಹ ಮನವ ಸಂತೈಸುವರನಾರನು ಕಾಣೆ ಶರಣರಲ್ಲದೆ
ನಿರಂಜನ ಚನ್ನಬಸವಲಿಂಗ.