ಉದಕದಲ್ಲುದಯಿಸಿದ ಪ್ರಾಣಿಗಳು
ಉದಕದಲ್ಲಿ ಸ್ಥಿತಿ, ಉದಕದಲ್ಲಿ ಮರಣವಲ್ಲದೆ ಬೇರೆ ಹೇಳಲುಂಟೆ?
ದುರ್ಮಾಯಾ ಸಂಸಾರದಲ್ಲಿ ಹುಟ್ಟಿದ ಅನಿತ್ಯಜನರಿಂಗೆ
ಆ ದುರ್ಮಾಯಾ ಸಂಸಾರದಲ್ಲಿಯೇ ಸ್ಥಿತಿ.
ಆ ದುರ್ಮಾಯಾ ಸಂಸಾರದಲ್ಲಿಯೇ ಮರಣವಲ್ಲದೆ,
ಗುರುಕರದಲ್ಲುದಿಸಿ ಸರ್ವಾಚಾರಸಂಪತ್ತೆಂಬಾಚರಣೆ ಚರಿತೆಯಲ್ಲಿ ಬೆಳೆದು
ಪರಬ್ರಹ್ಮ ಪರದಲ್ಲೇ ನಿರ್ವಯಲೆಂಬ
ನಿಜಶರಣಪದವೆಂತು ಸಾಧ್ಯವಪ್ಪುದು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ?