ಐ ಪದದಿಂದ ಪ್ರಾರಂಭವಾಗುವ ವಚನಗಳು:
ಐದು ಬಣ್ಣದ ಪಕ್ಷಿ ಬಿಂದುವ ನುಂಗಿ ಬಿಂದುವಿನೊಳು ನಿಂದಿತ್ತು.ನಾದವ ನುಂಗಿ ಸುನಾದಮಯವಾಗಿ ಕಳೆಯನಾವರಿಸಿ,ಕಳೆ ಗುರುನಿರಂಜನ ಚನ್ನಬಸವಲಿಂಗವಾದ ಮತ್ತೆ,ನಾದಬಿಂದುಕಳಾತೀತ ನಾಮ ನಿಂದಿತ್ತು ಶರಣಂಗೆ.
ಐದಂಗದಂಗನೆಯಾನು ಬಾರಯ್ಯಾ.ಐದು ಕೆಳದಿಯರೆನಗೆ ನೋಡಯ್ಯಾ.ಹಿರಿಯ ಕಾಲದ ದೇವರ ವರವೆನಗಯ್ಯಾ.ಬೇಡಿದ್ದು ಮಾಡಿ ಮನೆ ತುಂಬಿಸುವ ಬಾರಯ್ಯಾ.ಕೈಗೂಡಿ ಕಾರ್ಯವ ಮಾಡಿ, ಮನಗೂಡಿ ಒಗತನ ಮಾಡಿ,ಪ್ರಾಣಗೂಡಿ ಇಚ್ಫೆಯನರಿದಿತ್ತು,ಪರಮಪದವಿಯೊಳೋಲಾಡುವ ಬಾರಯ್ಯಾ,ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
ಐವತ್ತಾರು ದೇಶದೊಳಗುಳ್ಳ ಸ್ಥಾವರಂಗಳತನ್ನೊಳಗುಳ್ಳ ಭಕ್ತಿಯಲ್ಲರಿದರ್ಚಿಸಬಲ್ಲರೆ ಶರಣ.ಆ ಶರಣ ಶಿವನಂತಿಪ್ಪ ನೋಡಿರೆ.ಕಾಲತ್ರಿಪುರವ ಸುಟ್ಟು ಬೂದಿಯನು ಸರ್ವಾಂಗದಲ್ಲಿ ಧರಿಸಿರ್ದ ನೋಡಿರೆ.ಸರ್ಪಾಭರಣಭೂಸಿತನಾಗಿ ಚಂದ್ರನ ಮಸ್ತಕದಲ್ಲಿ ತಳೆದುಕೊಂಡಿರ್ದ ನೋಡಿರೆ.ಬ್ರಹ್ಮಕಪಾಲ ಕೈಯಲ್ಲಿ ಪಿಡಿದು, ಮಾಯೆಯ ಗೆಲಿದ ನೋಡಿರೆ.ನಾರಾಯಣನ ಕಣ್ಣ ಪಾದದಲ್ಲಿರಿಸಿ,ಗಂಗೆ ಗೌರಿಯ ಸಂಪರ್ಕ ಒಳಹೊರಗೆ ಪರಿಪೂರ್ಣ ನೋಡಿರೆ,ತನ್ನೊಲುಮೆಯ ಇರವೆಯಲ್ಲಿ ಕೈಲಾಸಮಧ್ಯಪೀಠ ಪ್ರಕಾಶದೊಳಗು ನೋಡಿರೆಹುಟ್ಟಿ ಬೆಳೆದುದ ಸವರಿಬಿಟ್ಟು ಕಟ್ಟಾಳುಯೆನಿಸಿ ಕಾಣುವಗುರುನಿರಂಜನ ಚನ್ನಬಸವಲಿಂಗದೊಳಗೆ.