ಅಂಗೈಯ ನೋಟದೊಳು ಕಂಗಳು ನಟ್ಟು,
ಕಂಗಳ ತೇಜ ಲಿಂಗದಲ್ಲರತು,
ಲಿಂಗದ ಪ್ರಭೆಯೊಳಗೆ ಅಂಗವೆಲ್ಲ ಲೀಯವಾಗಿ,
ಸಂಗನಿಸ್ಸಂಗವೆಂಬ ದಂದುಗ ಹರಿದು,
ಹಿಂದು ಮುಂದೆಂಬ ಭಾವವಳಿದು ನಿಂದ,
ನಿಜದ ನಿರಾಳದಲ್ಲಿ ಪ್ರಾಣ ಸಮರತಿಯಾಗಿಪ್ಪ
ಕಪಿಲಸಿದ್ಧಮಲ್ಲಿನಾಥನಲ್ಲಿ,
ಪ್ರಭುದೇವರ ಶ್ರೀಪಾದಕ್ಕೆ `ನಮೋ ನಮೋ' ಎಂದು
ಬದುಕಿದೆ ಕಾಣಾ, ಚೆನ್ನಬಸವಣ್ಣಾ.