ರ ಪದದಿಂದ ಪ್ರಾರಂಭವಾಗುವ ವಚನಗಳು:
ರಾಜಲಿಂಗವ ತಂದು ಪೂಜೆ ಕರದೊಳಗಿಟ್ಟುಭೇದಿಸ ಬಾರದದ ಆನಂದವ.ಅಭೇದ್ಯಕರನಿತ್ಯವೆಂದಾ ಗುರುವ ಪಾಲಿಸಿದಅಭೇದ್ಯ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನ.
ರುದ್ರಂಗೆ ಪಾರ್ವತಿಯು, ವಿಷ್ಣುವಿಂಗೆ ಲಕ್ಷಿ ್ಮಯು, ಬ್ರಹ್ಮಂಗೆ ಸರಸ್ವತಿಯುಮತ್ತೆ ತೃಣದಶನದ ಫಲದ ಆಹಾರದವರಸುತ್ತಿ ಮುತ್ತಿತ್ತು ನೋಡಾ ಮಾಯೆ;ಸಪ್ತಧಾತುವ ಮೀರಿ ಪಂಚಭೂತವ ಜರಿದಶರಣರಿಗೋಡಿತ್ತು ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನಾ.
ರತ್ನಪರೀಕ್ಷೆಯ ಮಾಡುವ ಅಣ್ಣಗಳೆಲ್ಲ ದಿಮ್ಮಿದರಯ್ಯ.ಬಲ್ಲಿದ ಬೆಲೆ ಎಂದೆಡೆ ಹುಲುಕಡ್ಡಿಯೊಳೈತೆ;ಬೆಲೆ ಇಲ್ಲದುದೆಂದಡೆ ಬಲ್ಲವರ ಮುಂದುಗೆಡಿಸುತೈತೆ.ಇದರ ಬೆಲೆಯ ಬಲ್ಲ ನಮ್ಮ ಬಸವಣ್ಣನಯ್ಯಾ,ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ರಜತಗಿರಿಯ ಮೇಲೆ ಅಜಪಯೋಗದಲಿ ಭಜಿಸುವೊಡೆಅದಕೆ ಹಲವು ಬೆಟ್ಟದಾ ಶೂಲಾಕೃತಿಯ ಮೇಲೆಭಾಳಲೋಚನನಿಪ್ಪ ಭಾವದಲಿಗಿರಿಗಳಾರೇಳೆಂಟರಾನೀಲ ಕಂಬುವಿನಲ್ಲಿಬಾಲಕನು ನಿಂದೀಗ ಬಾಲ್ಯವನು ಕಳೆದುತನ್ನಯ ರೂಪಿನಾ ಭಾವದಾ ಬೆಳಗಿನಲಿಗುರುವಿನಾ ಶುದ್ಧತೆಯ ಸಾಯುಜ್ಯವನು ಮೀರಿಸಂಬಂಧವಾತನು ತಾನೊಂದಾಗಿತವಕ ತವಕವ ಕೂಡಿಕಪಿಲಸಿದ್ಧ ಮಲ್ಲಿಕಾರ್ಜುನನ ತದ್ರೂಪಾದ.
ರೂಹಿಲ್ಲದ ನೆಲದಲ್ಲಿ ಸಸಿಯನೇಂ ಬೆಳೆವುದಯ್ಯಾ?ಭಯವಿಲ್ಲದವನಲ್ಲಿ ಭಕ್ತಿಯನೇಂ ಬೆಳೆವುದಯ್ಯಾ?ಭಯ ಕೆಟ್ಟಡೆ ಭಕ್ತಿ ಬಿಡುವುದು, ಮಹದೇವನೊಲ್ಲಕಪಿಲಸಿದ್ಧಮಲ್ಲಿನಾಥನಾ ಹೋ! ಅಯ್ಯಾ!
ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದುವು;ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು;ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು.ಅಕ್ಷರದ್ಲಲ್ಲ, ಶಬ್ದದಲ್ಲಿ, ಗ್ರಂಥಾನ್ವಯದಲ್ಲಿ;ಏನೆಂಬುದಿಲ್ಲ, ಮೊದಲೆ ಇಲ್ಲ.ಇಲ್ಲೆಂಬುವ ಅಹುದೆಂಬುವ ಉಭಯ ಶಬ್ದಕ್ಕೆ ಲೋಪವಿಲ್ಲನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಮಹಿಮನು.
ರಾಯ ಬಿನ್ನಾಣಿಯ ಮಣ್ಣ ಗೋವಿಂದನಒಂದೆ ಗವಿಯ ಸಂಗತುಒಂದೆ ಬೆಡಗಿನ ಕೊಳದಲಿಕ್ಕಿದನಯ್ಯಾ,ಕಪಿಲಸಿದ್ಧಮಲ್ಲಿನಾಥಯ್ಯ!ಕೊಳವನೊಡಹೊಯ್ದರೆಸಂಗತ ಲಿಂಗತವಾಯಿತ್ತಯ್ಯಾ.
ರೂಢಿಯರಿಯಲ್ಕೆ ಗಾಡಿಗನೆಂಬುದನಾ ಬಲ್ಲೆ, ಎನ್ನವರು ಬಲ್ಲರು.ನಿನ್ನನೇನ ಬೇಡಿಹರೆಲೆ ಅಯ್ಯಾ.ನೀ ಕೂರ್ತು ಕೊಡುವ ಸ್ವರ್ಗವನೊಲ್ಲರುನಿನ್ನಲುಳ್ಳ ಫಲಪದಾಗಳನೆನ್ನವರೊಲ್ಲರು.ಬೇಡಿ ಅರ್ಥಿಸುವುದಾದಡೆ ಹುಸಿ ;ಕೊಡು ಕೊಡದೆ ಮಾಣು.ಬೇಡುವ ಹೀನ ನಿನಗಲ್ಲದೆ ಎನ್ನವರಿಗುಂಟೆ?ಕಪಿಲಸಿದ್ಧಮಲ್ಲಿಕಾರ್ಜುನಾ.
ರೂಪಿಂಗೆ ರೂಪು, ಜಾÐನಕ್ಕೆ ಸುಜಾÐನ, ಪ್ರಾಣಕ್ಕೆ ಪ್ರಸಾದಲಿಂಗತ್ರಯವ ವೇಧೆಯಿಂದವೆ ತಂದುಅವರವರ ಕರದಲ್ಲಿ ದೀಕ್ಷೆಯ ಮಾಡಿದನು ಚೆನ್ನಬಸವಣ್ಣ,ಕಪಿಲಸಿದ್ಧಮಲ್ಲಿಕಾರ್ಜುನಾ.
ರುಚಿಯನತಿ ರುಚಿಸಿದಲ್ಲಿ ವಿಷವಾಯಿತ್ತು ;ರುಚಿಯು ನಿಜಶಕ್ತಿಯಂತಿರಲು ಅಮೃತವಾಯಿತ್ತು.ಇದು ಕಾರಣ, ಗುರುಭಕ್ತರಿಗೆ ಗುರುಕರುಣವೆ ಸಾಕು;ಅನ್ಯರ ಅನುಭವ, ಅನ್ಯರ ಸಮರಸಕಪಿಲಸಿದ್ಧಮಲ್ಲಿಕಾರ್ಜುನನ ಶರಣನಿಗನಿಷ್ಟ ಕೇಳಾ, ಮಡಿವಾಳಯ್ಯಾ.