ಸೀಮೆಯ ಮೀರಿದ ಸಿರಿವಂತನೆ,
ಪದವ ಮೀರಿದ ಬಹುರೂಪನೆ,
ಆನಂದ ಆನಂದವಾದ ನಿತ್ಯ ಸಾನಂದನೆ,
ಸುಗುಣದಲ್ಲಿ ಬೆಳಗುತಿಹ ನಿತ್ಯ ಸಾನಂದನೆಲೆ ಅಯ್ಯಾ,
ನಿನ್ನಾನಂದವನಾರು ಬಲ್ಲರು?
ನೀನು ಲಿಂಗತ್ರಯದೊಳಗೆ,
ಎರಡೈದು ಪಾದೋದಕದ,
ಐದಾರು ಕೂಡಿದ ಪ್ರಸಾದದಲ್ಲಿ,
ನಿತ್ಯಸುಖಿಯೆಂಬುದ ಸತ್ಯಶುಚಿಯೆಂಬುದ ನಿನ್ನವರೆ ಬಲ್ಲರು.
ಜಡವಿಡಿದು ನುಡಿವ ಅಜ್ಞಾನಿ ಹೊರಸುಗಳು ಬಲ್ಲರೆ?
ಕಪಿಲಸಿದ್ಧಮಲ್ಲಿಕಾರ್ಜುನಾ.