ಧರೆಯಗಲದೊಳಗೊಂದು ಹಿರಿದಪ್ಪ ಲೋಭವು ತನುವೆಂಬುದನು ತಾನು ಲೀಯ್ಯಮಾಡಿ ಮನ ಮಗ್ನದೊಳಗೆ ನೆಲೆಗೊಂಡನೆಂದಡೆ ನೆಲಗೊಳ್ಳಲೀಯ್ಯದೆ ತನ್ನ ಮಾಯವ ಮಾಡಿತ್ತು ಕರುಣಾಕರನೆ ಕಳೆದು ಕಾಯಯ್ಯ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಾ.
ಧನಕ್ಕೆ ಮನಕ್ಕೆ ಕಾಮಿಸರು ಎನ್ನಯ್ಯಾ, ನಿಮ್ಮ ನೆನೆದು ನಿಮ್ಮ ನೋಡಿ ನಿಮ್ಮ ತೋರಿ ನಿಮ್ಮ ಚಿತ್ತದಲ್ಲಿರಿಸಾ. ಸಲೆ ನಿಮ್ಮ ಬೇಡುವ ಮನ, ದಾಸಿಮನ ಮಾಡರೆನ್ನ [ಕಪಿಲಸಿದ್ಧ] ಮಲ್ಲಿಕಾರ್ಜುನಯ್ಯ ತಂದೆ.
ಧ್ಯೇಯಕ್ಕೆ ಅ್ಕರೂಪು ದಾಯನುಂಗಿಪ್ಪುದೀ ತಾನೊಂದು ರೂಪಾಗಿ ದಾಯವಿಲ್ಲದೆ ಇಪ್ಪುದು. ಅದು ನಿಹಿತ ತಾನು ದಾಯವು ವಾಯವು ಕಾಯಕ್ಕೆ ಅತಿ ಬ್ರಹ್ಮವಾಯಂದರಿಯಲ್ಕೆ ಸುಲಭ ತಾನೆ ಕಾಳದಲಿ ಧವಳತೆಯ ಸಾನಂದದನ್ವತೆಯ ಸಾಯದೆ ಸತ್ತಾದ ಕಂಡನಿದನು. ಕಂಡು ಬ್ರಹ್ಮಾಂಡವನು ಉಂಡನದನನ್ವಯದ ಮಂಡಲಕ್ಕದು ಕರ ಚೋದ್ಯ. ತಾನು ಕಂಡು ಕಾಣದೆ ಈಗ ಉಂಡು ಉಣ್ಣದೆ ಈಗ ಕಂಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.